ಆಲೂಗರದಲ್ಲಿ ಭಾನುವಾರ ‘ಕ್ರೀಯಾಶೀಲ’ ಚಿಂತಕ ಪ್ರಶಸ್ತಿ ಪ್ರಧಾನ

147

ಪ್ರಜಾಸ್ತ್ರ ಸುದ್ದಿ

ದೇವರ ಹಿಪ್ಪರಗಿ: ದಿ.ಪ್ರೊ.ಎಸ್ ಎಸ್ ಆಲಗೂರ ಮೆಮೋರಿಯಲ್ ಫೌಂಡೇಶನ್ ವತಿಯಿಂದ ಭಾನುವಾರ ತಾಲೂಕಿನ ಆಲಗೂರಿನಲ್ಲಿ ಕ್ರೀಯಾಶೀಲ ಚಿಂತಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಅಖಿಲ ಕರ್ನಾಟಕ ಸ್ನೇಹಗಂಗಾ ವಾಹಿನಿ ಸಂಸ್ಥಾಪಕ ಅಧ್ಯಕ್ಷ ದಿ.ಎಸ್ ಎಸ್ ಆಲಗೂರ ಅವರ ಜನ್ಮ ದಿನಾಚರಣೆ ಈ ಸಮಾರಂಭ ನಡೆಸಲಾಗುತ್ತಿದೆ.

ಆಲಗೂರ ಸರ್ಕಾರಿ ಪ್ರೌಢ ಶಾಲೆಯ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಕಲಬುರ್ಗಿ ನಿವೃತ್ತ ಪ್ರಾಧ್ಯಾಪಕ ಎಲ್.ಬಿ ಹಿಟ್ಟಿನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹಿರಿಯ ವಕೀಲ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾದಿಕಾರದ ಮಾಜಿ ಅಧ್ಯಕ್ಷ  ಸುಭಾಸ.ಎಸ್ ಛಾಯಾಗೋಳ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿವರಣಪ್ಪ ವಾಲಿ ಭಾಗವಹಿಸಲಿದ್ದಾರೆ. ಪ್ರೊ.ಎಸ್.ಎಸ್ ಆಲಗೂರ ಅವರ ಜೀವನ ಮತ್ತು ಸಾಧನೆಯ ಕುರಿತು ನಿವೃತ್ತ ಪ್ರಾಧ್ಯಾಪಕ ಎಂ.ಬಿ ಬಿರಾದಾರ ಉಪನ್ಯಾಸ ನೀಡಲಿದ್ದಾರೆ.

ನಾಡಿನ ಪ್ರಗತಿ ಪರ ಯಶಸ್ವಿ ರೈತ ಮಹಿಳೆ ಕವಿತಾ ಮಿಶ್ರಾ ಅವರಿಗೆ ಈ ಸಾಲಿನ “ಕ್ರೀಯಾಶೀಲ”ಚಿಂತಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಸನ್ಮಾನಿತರಾಗಿ ಡಿ.ಎಚ್ ಕುಲಕರ್ಣಿ, ಪ್ರೊ.ಎನ್. ಬಿ ಸಜ್ಜನ್, ಪ್ರೊ.ಎಮ್ ವ್ಹಿ ಗಣಾಚಾರಿ, ದೇಶಪಾಂಡೆ ಚಿದಾನಂದ, ಪ್ರೊ.ಎಮ್ ಎಲ್ ಕುರಿ ಹಾಗೂ ಎಚ್.ಎಮ್ ವಾಲಿಕಾರ, ಇಮ್ಲಾಪೂರ  ಬಸಂತರಾಯ, ಭೀಮನಗೌಡ ಪಾಟೀಲ್, ಶಂಕರಗೌಡ ಪಾಟೀಲ್, ಶರಣು ಧರಿ, ಮಾಹಾಂತೇಶ ಮುರಕನಾಳ, ಶಂಕರ ಕೋರಿ ಉಪಸ್ಥತಿ ಇರಲಿದ್ದಾರೆ ಎಂದು ಫೌಂಡೇಶನ್ ಅಧ್ಯಕ್ಷ ಸರೋಜಿನಿ ಎಸ್ ಗಣಪೂರ, ಪ್ರಧಾನ ಕಾರ್ಯದರ್ಶಿ ವ್ಹಿ.ಎಸ್ ಆಲಗೂರ, ಕಾರ್ಯದರ್ಶಿ ವೀಣಾ.ಬಿ ಯರಗೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!