ಬಂಡಾಯದ ಬಾವುಟ ಹಾರಿಸಿರುವ ಪೈಲೆಟ್ ಟೀಂಗೆ ನೋಟಿಸ್

586

ಪ್ರಜಾಸ್ತ್ರ ಸುದ್ದಿ

ಜೈಪುರ: ರಾಜಸ್ತಾನದಲ್ಲಿನ ಆಡಳಿತ ಪಕ್ಷದೊಳಗಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ಜೋರಾಗ್ತಿದೆ. ಹೀಗಾಗಿ ಬಂಡಾಯದ ಬಾವುಟ ಹಾರಿಸಿರುವ ಸಚಿನ ಪೈಲೆಟ್ ಸೇರಿದಂತೆ 18 ಶಾಸಕರಿಗೆ ನೋಟಿಸ್ ನೀಡಲಾಗಿದೆ.

ಸಿಎಂ ಅಶೋಕ ಗೆಹ್ಲೋಟ್ ವಿರುದ್ಧ ಸಿಡಿದೆದ್ದಿರುವ ಯುವ ನಾಯಕ ಪೈಲೆಟ್, ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದಾರೆ. ಸಿಎಂ ನಿವಾಸದಲ್ಲಿ ಕರೆದಿದ್ದ, ಶಾಸಕಾಂಗ ಪಕ್ಷದ ಸಭೆಗೆ ಪೈಲೆಟ್ ಸೇರಿ 18 ಜನ ಶಾಸಕರು ಗೈರಾಗಿದ್ದಾರೆ. ಹೀಗಾಗಿ ನೋಟಿಸ್ ನೀಡಲಾಗಿದೆ.

ನೋಟಿಸ್ ಸಂಬಂಧ ಎರಡು ದಿನಗಳಲ್ಲಿ ಉತ್ತರ ನೀಡದೆ ಹೋದಲ್ಲಿ ಶಾಸಕತ್ವ ಸ್ಥಾನದಿಂದ ಹಿಂತೆಗೆದುಕೊಳ್ಳುತ್ತಾರೆಂದು ಪರಿಗಣಿಸಲಾಗುವುದು ಎಂದಿದ್ದಾರೆ. ಹೀಗೆ ಹಿರಿಯ ನಾಯಕ ಹಾಗೂ ಯುವ ನಾಯಕನ ನಡುವೆ ಜಿದ್ದಾಜಿದ್ದು ನಡೆದಿದೆ.

ರಾಜಸ್ತಾನದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೆ ಸಾಕಷ್ಟು ಕಷ್ಟ ಪಟ್ಟಿದ್ದೇನೆ. ಚುನಾವಣೆಯಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡಿದ್ದಾನೆ. ಹೀಗಾಗಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವುದಿಲ್ಲವೆಂದು ಸಚಿನ ಪೈಲೆಟ್ ಹೇಳುವ ಮೂಲಕ, ಬಿಜೆಪಿ ಸೇರ್ತಾರೆ ಅನ್ನೋ ಮಾತಿಗೆ ತೆರೆ ಎಳೆದಿದ್ದಾರೆ. ಪೈಲೆಟ್ ನಡೆಯಿಂದ ಡಿಸಿಎಂ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲಾಗಿದೆ.




Leave a Reply

Your email address will not be published. Required fields are marked *

error: Content is protected !!