ಪ್ರಜಾಸ್ತ್ರ ಪಾಲಿ‘ಟ್ರಿಕ್ಸ್’
ಜೈಪುರ: ಕಳೆದೊಂದು ತಿಂಗಳಿನಿಂದ ರಾಜಸ್ಥಾನದಲ್ಲಿ ನಡೆಯುತ್ತಿದ್ದ ಪೊಲಿಟಿಕಲ್ ಹೈಡ್ರಾಮ್ ಮುಗಿದಿದ್ದು, ಸಿಎಂ ಗೆಹ್ಲೋಟ್ ವಿಶ್ವಾಸಮತ ಗೆಲ್ಲುವಲ್ಲಿ ಸಕ್ಸಸ್ ಆಗಿದ್ದಾರೆ. ಈ ಮೂಲಕ ಬಿಜೆಪಿ ತಂತ್ರ ನಡೆಯಲಿಲ್ಲವೆಂದು ಹೇಳಿದ್ದಾರೆ.
ಕರ್ನಾಟಕ, ಮಧ್ಯಪ್ರದೇಶ, ಗೋವಾ, ಮಣಿಪುರ, ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ನಡೆಸಿದ ಪಿತೂರಿ ಇಲ್ಲಿ ನಡೆಯಲಿಲ್ಲ. ಈ ಎಲ್ಲ ರಾಜ್ಯಗಳಲ್ಲಿ ನಡೆಸಿದ ತಂತ್ರವನ್ನ ಇಲ್ಲೂ ಪ್ರಯೋಗ ಮಾಡಿದ್ರು. ಆದ್ರೆ, ಅವರ ಆಟ ನಡೆಯಲಿಲ್ಲವೆಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಸದನದಲ್ಲಿ ಸಿಕ್ಕ ಗೆಲುವು ರಾಜ್ಯದ ಜನರ ಗೆಲುವು. ಇನ್ಮುಂದೆ ನಾವು ಕೋವಿಡ್ 19 ವಿರುದ್ಧದ ಹೋರಾಟದ ಕುರಿತು ಗಮನಹರಿಸಬೇಕಾಗಿದೆ ಎಂದು ಸಿಎಂ ಅಶೋಕ ಗೆಹ್ಲೋಟ್ ಹೇಳಿದ್ದಾರೆ.