ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕಾಂಗ್ರೆಸ್ ಪಕ್ಷದ ನೀತಿಗಳನ್ನ ಟೀಕಿಸಿ ಪತ್ರಿಕೆಯಲ್ಲಿ ಬರೆದ ಲೇಖನದಿಂದಾಗಿ, ಸಂಜಯ ಝಾ ಅವರನ್ನ ವಕ್ತಾರ ಸ್ಥಾನ ವಜಾ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಬುಧವಾರ ರಾತ್ರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಝಾ, ತನ್ನ ಆಂತರಿಕ ಮೌಲ್ಯ ಹಾಗೂ ಸಹಿಷ್ಣುತೆಯಿಂದ ಪಕ್ಷ ದೂರವಾಗ್ತಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ನಿರಂಕುಶವಾಗುವುದರ ವಿರುದ್ಧ ಅಂದು ನೆಹರು ಸ್ವತಃ ವಿಮರ್ಶಾತ್ಮಕ ಬರಹ ಬರೆದಿದ್ರು ಎಂದು ನೆನಪು ಮಾಡಿಕೊಟ್ಟಿದ್ದಾರೆ.
ಎರಡು ಲೋಕಸಭೆ ಹಾಗೂ ಹಲವು ವಿಧಾನಸಭೆ ಚುನಾವಣೆಗಳಲ್ಲಿ ಸೋಲು ಅನುಭವಿಸಿದ್ರೂ ಮೇಲೇಳಲು ಪಕ್ಷ ಗಂಭೀರ ಪ್ರಯತ್ನ ಮಾಡ್ತಿಲ್ಲ ಎಂದಿದ್ದಾರೆ. ಏನೇ ಆದರೂ ತಾವು ಕಾಂಗ್ರೆಸ್ ನ ಸೈದ್ಧಾಂತಿಕ ವ್ಯಕ್ತಿಯಾಗಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.