ದಿಲ್ಲಿ ಎಲೆಕ್ಷನ್: ನಾಮಪತ್ರ ಸಲ್ಲಿಸದೆ ಕೇಜ್ರಿವಾಲ್ ವಾಪಸ್

474

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಿಎಂ ಅರವಿಂದ ಕೇಜ್ರಿವಾಲ್ ಇಂದು ನಾಮಪತ್ರ ಸಲ್ಲಿಸಲು ಹೋಗಿದ್ರು. ಆದ್ರೆ, ಟೈಂ ಮುಗಿದು ಹೋದ ಕಾರಣ ಸಿಎಂ ನಾಮಪತ್ರ ಸಲ್ಲಿಸದೆ ವಾಪಸ್ ಆಗಿದ್ದಾರೆ. ಇದಕ್ಕೆ ಕಾರಣವಾಗಿರೋದು ಆಮ್ ಆದ್ಮಿ ಪಾರ್ಟಿಯ ರೋಡ್ ಶೋ.

ಯೆಸ್, ಸಿಎಂ ಕೇಜ್ರಿವಾಲ್ ರೋಡ್ ಶೋ ವಾಲ್ಮೀಕಿ ಮಂದಿರದಿಂದ ಶುರುವಾಗಿ ಅವರ ವಿಧಾನಸಭಾ ಕ್ಷೇತ್ರದ ಚುನಾವಣೆ ಕಚೇರಿಗೆ ಹೋಗಬೇಕಿತ್ತು. ಹೀಗೆ ಹೊರಟ ಅವರು 3ಗಂಟೆ ಒಳಗೆ ಕಚೇರಿಗೆ ತಲುಪುವ ಬದಲು ತಡವಾಗಿ ಹೋಗಿದ್ದಕ್ಕೆ ನಾಮಪತ್ರ ಸಲ್ಲಿಸಿಲ್ಲ. ಈ ಬಗ್ಗೆ ಮಾತ್ನಾಡಿದ ಕೇಜ್ರಿವಾಲ್ ಜನರನ್ನ ಬಿಟ್ಟು ಹೇಗೆ ಹೋಗಲಿ. ನಾಳೆ ಹೋಗಿ ನಾಮಪತ್ರ ಸಲ್ಲಿಸುತ್ತೇನೆ ಅಂತಾ ಹೇಳಿದ್ದಾರೆ. ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನವಾಗಿದೆ. ಫೆಬ್ರವರಿ 8ಕ್ಕೆ ಎಲೆಕ್ಷನ್ ನಡೆಯಲಿದ್ದು, ಫೆಬ್ರವರಿ 9ಕ್ಕೆ ಫಲಿತಾಂಶ ಹೊರ ಬೀಳಲಿದೆ.




Leave a Reply

Your email address will not be published. Required fields are marked *

error: Content is protected !!