ಊಟದ ಜೊತೆ ಬಟ್ಟೆ ಸಹ ಸಿಕ್ತು

432

ಮೈಸೂರು: ಕರೋನಾ ಲಾಕ್ ಡೌನ್ ನಿಂದಾಗಿ ನಿರ್ಗತಿಕರು, ಬಡವರು, ಕೂಲಿ ಕಾರ್ಮಿಕರ ಬದುಕು ಹೈರಾಣಾಗಿದೆ. ಅವರಿಗೆ ಅನೇಕರ ದಿನಸಿ ಕಿಟ್ ವಿತರಣೆ ಮಾಡ್ತಿದ್ದಾರೆ. ಇದರ ಜೊತೆಗೆ ಕೆಲವರು ಸರ್ ನಮ್ಗೆ ಬಟ್ಟೆ ಇದ್ರೆ ಕೊಡಿ ಅನ್ನೋ ಮಾತುಗಳು ಸಾಂಸ್ಕೃತಿಕ ನಗರಿಯಲ್ಲಿ ಕೇಳಿ ಬಂದಿತ್ತು.

ಇದೀಗ ಬಡವರ ಧ್ವನಿಗೆ ಸ್ಪಂದಿಸಿರುವ ಸವಿತ ಹಾಗೂ ವಕೀಲರಾದ ಶ್ರೀನಿವಾಸ ಅವರು, ಊಟದ ಜೊತೆಗೆ ಬಟ್ಟೆಗಳನ್ನ ಸಹ ನೀಡಿದ್ದಾರೆ. ನಗರದ ಕೆಲ ಸ್ನೇಹಿತರು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ರು. ಇದಕ್ಕೆ ಸ್ಪಂದಿಸಿರುವ ಇವರು, ಶೆಡ್ ಗಳಲ್ಲಿ ವಾಸವಾಗಿರುವವರಿಗೆ ಬಟ್ಟೆ ವಿತರಣೆ ಮಾಡಿದ್ದಾರೆ.

ಹೀಗೆ ಊಟದ ಜೊತೆಗೆ ಅವರ ಮನವಿ ಮಾಡಿಕೊಂಡಿದ್ದಕ್ಕೆ ಒಂದಿಷ್ಟು ಬಟ್ಟೆ ಸಹ ನೀಡುವ ಮೂಲಕ, ತುರ್ತು ಪರಿಸ್ಥಿತಿಯಲ್ಲಿ ಸಹಾಯ ಮಾಡಿದಕ್ಕೆ ಧನ್ಯವಾದಗಳನ್ನ ಸಲ್ಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!