ಪ್ರಜಾಸ್ತ್ರ ಸುದ್ದಿ
ಬಳ್ಳಾರಿ: ಗಣಿನಾಡಿನಲ್ಲಿ ಕರೋನಾ ಸೋಂಕು ಹಾಗೂ ಸಾವಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ. ಇದುವರೆಗೂ ಜಿಲ್ಲೆಯಲ್ಲಿ 984 ಸೋಂಕು ಪ್ರಕರಣಗಳು ದಾಖಲಾಗಿವೆ. ಅಲ್ದೇ, 33 ಜನ ಸಾವನ್ನಪ್ಪಿದ್ದಾರೆ. ಮರಣ ದಾಖಲೆಯಲ್ಲಿ ಬೆಂಗಳೂರು ನಂತರ ಬಳ್ಳಾರಿ 2ನೇ ಸ್ಥಾನದಲ್ಲಿದೆ.
ಈಗಿನ ಪರಿಸ್ಥಿತಿ ಜಿಲ್ಲೆಯಲ್ಲಿ ಮುಂದುವರೆದ್ರೆ, ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ ಎಂದು ತಿಳಿದುಕೊಂಡಿರುವ ಜನತೆ, ಸ್ವಯಂಕೃತ ಲಾಕ್ ಡೌನ್ ಗೆ ಮುಂದಾಗಿದ್ದಾರೆ. ಇಂದಿನಿಂದ ಒಂದು ವಾರಗಳ ಕಾಲ ಮಾಧ್ಯಾಹ್ನ 3ಗಂಟೆಯಿಂದ ಲಾಕ್ ಡೌನ್ ಮಾಡಲು ಮುಂದಾಗಿದ್ದಾರೆ.
ನಗರದ ಎಲ್ಲ ವ್ಯಾಪಾರಸ್ಥರು ಸಭೆ ನಡೆಸಿ, ಮುಂಜಾನೆ 7ಗಂಟೆಯಿಂದ ಮಧ್ಯಾಹ್ನ 3ಗಂಟೆಯ ತನಕ ಮಾತ್ರ ವ್ಯಾಪಾರ ವಹಿವಾಟು ಮಾಡುವುದು. ಆ ನಂತರ ಸ್ವಯಂಕೃತವಾಗಿ ಲಾಕ್ ಡೌನ್ ನಿರ್ಧಾರಕ್ಕೆ ಬಂದಿದ್ದಾರೆ. ಔಷಧಿ ಅಂಗಡಿಗಳನ್ನು ಹೊರತು ಪಡಿಸಿ ಉಳಿದೆಲ್ಲ ವ್ಯಾಪಾರವನ್ನ ಒಂದು ವಾರಗಳ ಕಾಲ ಬಂದ್ ಗೆ ಮುಂದಾಗಿದ್ದಾರೆ. ಇದು ಸಕ್ಸಸ್ ಆಗಬಹುದು ಎನಿಸ್ತಿದೆ. ಏನಾಗುತ್ತೆ ಕಾದು ನೋಡಬೇಕು.