ಸಿಂದಗಿ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ, ದೇಶದೆಲ್ಲೆಡೆ ಸೇವಾ ಸಪ್ತಾಹ ಕಾರ್ಯಕ್ರಮ ನಡೆಸಲಾಗ್ತಿದೆ. ಅದೇ ರೀತಿಯಾಗಿ ಪಟ್ಟಣದಲ್ಲಿ ಬಿಜೆಪಿ ಮಂಡಲ ವತಿಯಿಂದ ‘ಸೇವಾ ಸಪ್ತಾಹ ಕಾರ್ಯಕ್ರಮ’ ನಡೆಸಲಾಯ್ತು. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ನೀಡುವ ಮೂಲಕ ಸೇವಾ ಸಪ್ತಾಹ ನಡೆಸಲಾಯ್ತು.
ಈ ವೇಳೆ ಅಶೋಕ ಅಲ್ಲಾಪುರ, ಬಿ.ಹೆಚ್.ಬಿರಾದರ, ಶ್ರೀಶೈಲಗೌಡ ಬಿರಾದರ, ಗುರು ತಳವಾರ, ಚಂದ್ರಶೇಖರ ಅಮಲಿಹಾಳ, ಶಿವಾನಂದ ರೋಡಗಿ, ಸಿದ್ದಲಿಂಗಯ್ಯ ಹಿರೇಮಠ, ಪ್ರಕಾಶ ನಂದಿಕೋಲ, ರವಿ ಬಿರಾದರ, ಸಿದ್ರಾಮ ಆನಗೊಂಡ ಸೇರಿದಂತೆ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ರು.