ಪೈಲ್ವಾನ್ ಮೂವಿ ಪೈರಸಿ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ನಡುವಿನ ಕಾದಾಟ ಇದೀಗ ನಟರ ನಡುವೆ ಶುರುವಾಗಿದೆ ಎನ್ನಲಾಗ್ತಿದೆ. ನನ್ನ ಅನ್ನದಾತ, ಸೆಲೆಬ್ರಿಟಿಗಳಿಗೆ ಪ್ರಚೋದನೆ ಕೊಡಬೇಡಿ ಎಂದು ದರ್ಶನ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ರು. ಈ ಬಗ್ಗೆ ಸುದೀಪ ಟ್ವೀಟ್ ಮಾಡಿದ್ದಾರೆ.
ಎಚ್ಚರಿಕೆ ಸ್ವೀಕರಿಸುವುದಿಲ್ಲ. ಬೆದರಿಕೆಯಿಂದ ಏನೂ ಆಗೋದಿಲ್ಲ. ಪದಗಳಿಂದ ಯುದ್ಧ ಗೆಲ್ಲಲು ಆಗೋದಿಲ್ಲ. ಹಾಗೇ ಆಗಿದ್ರೆ ಇವತ್ತು ಅದೆಷ್ಟೋ ರಾಜರು ಇರ್ತಿದ್ರು. ನಾನು ಮನುಷ್ಯ ಹಾದಿಯಲ್ಲಿ ನಡೆಯಲಿ ಬಯಸುತ್ತೇನೆ ಎಂದು ಕಿಚ್ಚ ಸುದೀಪ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ದರ್ಶನ ಅಭಿಮಾನಿಗಳು ಸಹ ರೀಟ್ವೀಟ್ ಮಾಡಿದ್ದಾರೆ. ಹೀಗೆ ಒಂದು ಸಿನ್ಮಾದ ಪೈರಸಿ ವಿಚಾರ, ಮೊದ್ಲೇ ದೂರವಾಗಿರುವ ಸ್ಟಾರ್ ನಟರಿಬ್ಬರ ನಡುವೆ ಮತ್ತೆ ಟಾಕ್ ಫೈಟ್ ಶುರು ಮಾಡುವಂತೆ ಮಾಡಿದೆ.