ನಾಳೆ ಚಂದನವನದ ಯಜಮಾನ ಡಾ.ವಿಷ್ಣುವರ್ಧನ ಅವರ ಹುಟ್ಟು ಹಬ್ಬ. ಅವರ ಅಭಿಮಾನಿಗಳು ಅಪ್ಪಾಜಿಯ ಹುಟ್ಟು ಹಬ್ಬವನ್ನ ಭರ್ಜರಿಯಾಗಿ ಆಚರಣೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ನಟ ಕಿಚ್ಚ ಸುದೀಪ ವಿಷ್ಣು ಅವರ ಬಿಗ್ ಫ್ಯಾನ್ ಆಗಿದ್ದು, ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಟ್ವೀಟ್ ಮಾಡಿರುವ ನಟ ಸುದೀಪ, ನಿಮ್ಮ ಹಾದಿಯಲ್ಲಿ ನಡೆಯಲು ಈ ನಿಮ್ಮ ಅಭಿಮಾನಿಯ ಪ್ರಯತ್ನ ಎಂದು ಬರೆದಿದ್ದಾರೆ. ಅಭಿಮಾನಿಗಳು ಟ್ವೀಟ್ ಮಾಡಿರುವುದಕ್ಕೆ ಸುದೀಪ ರೀಟ್ವೀಟ್ ಮಾಡುವ ಮೂಲಕ ವಿಷ್ಣು ಹೇಗೆ ಬದುಕಿದ್ರು ಅನ್ನೋದನ್ನ ಹೇಳಿದ್ದಾರೆ.
ವಿಷ್ಣು ಸೇನಾ ವತಿಯಿಂದ ರಂಗೋತ್ಸವ ಮಾಡಲಾಗ್ತಿದೆ. ಸೆಪ್ಟೆಂಬರ್ 20ಕ್ಕೆ ನಿಷ್ಕರ್ಶ ಸಿನ್ಮಾ ಮರುಬಿಡುಗಡೆಯಾಗ್ತಿದೆ. ಹೀಗೆ ವಿಷ್ಣು ಅವರ ಹೆಸರಿನಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ.
ಇನ್ನು ಸೂಪರ್ ಸ್ಟಾರ್ ಉಪೇಂದ್ರ ಹಾಗೂ ನಟಿ ಶ್ರುತಿ ಅವರ ಹುಟ್ಟು ಹಬ್ಬ ಸಹ ನಾಳೆಯಿದ್ದು, ಅಭಿಮಾನಿಗಳು ಅವರಿಗೆ ವಿಶ್ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ.