ಬ್ರೇಕಿಂಗ್ ನ್ಯೂಸ್
Search

ಸುದೀಪ್, ದರ್ಶನ್ ಬಿಜೆಪಿ ಪರ ಪ್ರಚಾರ

111

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಚಂದನವನದ ಒಂದು ಕಾಲದ ಸ್ನೇಹಿತರಾಗಿದ್ದ ನಟರಾದ ಸುದೀಪ್ ಹಾಗೂ ದರ್ಶನ್ ಬೇರೆ ಬೇರೆಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದೀಗ ಈ ನಟರು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ.

ಹೌದು, ನಟ ಸುದೀಪ್ ಸಿಎಂ ಬೊಮ್ಮಾಯಿ ಅವರ ನಡುವಿನ ಆತ್ಮೀಯ ಸಂಬಂಧದಿಂದಾಗಿ ಬಿಜೆಪಿ ಅಭ್ಯರ್ಥಿಗಳ ಪರ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ. ಇದೆ ರೀತಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಬೆಂಬಲಿಸಿದ್ದು, ಹಾಗೂ ನಟ ದರ್ಶನ್ ಸ್ನೇಹಿತರು ಬಿಜೆಪಿಯಿಂದ ಸ್ಪರ್ಧಿಸಿದ್ದು ಈ ಎರಡು ಕಾರಣಗಳಿಂದ ಪ್ರಚಾರ ನಡೆಸಿದ್ದಾರೆ.

ಇಂದು ಕೋಲಾರ ಜಿಲ್ಲೆಯ ವಿವಿಧ ಕ್ಷೇತ್ರಗಳು ಸೇರಿ ಸಂಜೆ ಬೆಂಗಳೂರಿನ ವಿವಿಧ ಕ್ಷೇತ್ರಗಳಲ್ಲಿ ನಟ ದರ್ಶನ್ ಮತಯಾಚನೆ ನಡೆಸುತ್ತಿದ್ದಾರೆ. ಈ ಮೂಲಕ ಇಬ್ಬರು ಸ್ಟಾರ್ ನಟರು ಬಿಜೆಪಿ ಅಭ್ಯರ್ಥಿಗಳ ಪರ ಕಾಂಪೇನ್ ನಡೆಸಿದ್ದು, ಇದು ಎಷ್ಟರ ಮಟ್ಟಿಗೆ ಕಮಲ ನಾಯಕರಿಗೆ ಪ್ಲಸ್ ಆಗುತ್ತೆ ಅನ್ನೋದು ಮೇ 13ಕ್ಕೆ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!