ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿ ಆಘಾತಕಾರಿ ಘಟನೆ

264

ಪ್ರಜಾಸ್ತ್ರ ಸುದ್ದಿ

ಶಿವಮೊಗ್ಗ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಖೈದಿಯೊಬ್ಬ ಮೂವರಿಗೆ ಚಮಚದಿಂದ ಇರಿದು ಗಾಯಗೊಳಿಸಿರುವ ಘಟನೆ ನಡೆದಿದೆ. ಪ್ರಶಾಂತ ಅನ್ನೋ ಖೈದಿ ಈ ಕೆಲಸ ಮಾಡಿದ್ದಾನೆ. ದೇವೇಂದ್ರಪ್ಪ, ಮಲ್ಲೇಶಪ್ಪ, ಬೆನಕ ಶೆಟ್ಟಿ ಅನ್ನೋ ಮೂವರ ಮೇಲೆ ಹಲ್ಲೆ ಮಾಡಿದ್ದಾನೆ.

ನೀರಿನ ವಿಚಾರಕ್ಕೆ ಖೈದಿಗಳ ನಡುವೆ ಗಲಾಟೆಯಾಗಿದೆ. ಆಗ ಪ್ರಶಾಂತ ಮೂವರ ಮೇಲೆ ಹಲ್ಲೆ ಮಾಡಿದ್ದಾನೆ. ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಮೂಲದ ಪ್ರಶಾಂತ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ ಎನ್ನಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!