ರಾಬರ್ಟ್ ನಿರ್ಮಾಪಕ ಹತ್ಯೆಗೆ ಸಂಚು: ಆರೋಪಿಗಳ ಬಂಧನ

305

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕನ್ನಡ ಸಿನಿ ರಂಗದ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಹಾಗೂ ಇವರ ಸಹೋದರ ದೀಪಕ ಹತ್ಯೆಗೆ ಸಂಚು ರೂಪಿಸಲಾಗಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ಘಟನೆ ಸಂಬಂಧ ಇದೀಗ 7 ಜನ ಆರೋಪಿಗಳನ್ನ ಬಂಧಿಸಲಾಗಿದೆ.

ಮೋಹನ, ಟೋನಿ ಜೊಸೆಫ್, ದರ್ಶನ, ಗಿರೀಶ, ರಾಜನ್ ಸೇರಿದಂತೆ 7 ಜನರನ್ನ ಬಂಧಿಸಲಾಗಿದೆ. ಇನ್ನು ಬಾಂಬೆ ರವಿ ಹಾಗೂ ಭರತ ಬಂಧನದ ಕಾರ್ಯಾಚರಣೆ ನಡೆದಿದೆ. ಯಾವ ಕಾರಣಕ್ಕೆ ಹತ್ಯೆಗೆ ಸಂಚು ರೂಪಿಸಲಾಗಿತ್ತು ಅನ್ನೋದು ತಿಳಿದು ಬಂದಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ತಲೆಮರೆಸಿಕೊಂಡಿರುವ ಬಾಂಬೆ ರವಿ ಹೇಳಿರುವುದ್ರಿಂದ ಈ ಸಂಚು ನಡೆದಿದೆ ಎನ್ನಲಾಗ್ತಿದೆ. ಹಣ ಕಾಸಿನ ವಿಚಾರಕ್ಕೆ ಇರಬಹುದು ಅನ್ನೋ ಶಂಕೆ ವ್ಯಕ್ತವಾಗಿದೆ. ನಿರ್ಪಾಪಕ ಉಮಾಪತಿ, ದೀಪಕ ಜೊತೆಗೆ ಕುಖ್ಯಾತ ರೌಡಿಗಳಾದ ಸೈಕಲ್ ರವಿ, ಬೇಕರಿ ರಘು ಹತ್ಯೆಗೂ ಪ್ಲಾನ್ ನಡೆದಿತ್ತು ಅನ್ನೋದು ತಿಳಿದು ಬಂದಿದೆ.

ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ, ದರ್ಶನ, ಸುದೀಪ, ಶ್ರೀಮುರುಳಿ ಸೇರಿದಂತೆ ಸ್ಟಾರ್ ನಟರ ಬಿಗ್ ಬಜೆಟ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದೀಗ ಇವರ ನಿರ್ಮಾಣದ ರಾಬರ್ಟ್ ಸಿನಿಮಾ ರಿಲೀಸ್ ಆಗಬೇಕಿದೆ.




Leave a Reply

Your email address will not be published. Required fields are marked *

error: Content is protected !!