ಕೊನೆಯ ಬಾರಿ ಅನ್ನೋ ಅನುಕಂಪದಿಂದ ಮನಗೂಳಿ ಗೆದ್ದಿದ್ದು: ಸಚಿವ ಹಾಲಪ್ಪ

387

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಕಳೆದ ಬಾರಿಯ 2018ರ ಚುನಾವಣೆಯಲ್ಲಿ ಕೊನೆಯ ಚುನಾವಣೆ ಅನ್ನೋ ಅನುಕಂಪದಿಂದ ಎಂ.ಸಿ ಮನಗೂಳಿ ಸಿಂದಗಿಯಲ್ಲಿ ಗೆದ್ದಿದ್ದರು ಎಂದು ಗಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.

ಕಳೆದ ಬಾರಿ ಭಾವನಾತ್ಮಕವಾಗಿ ಮಾತನಾಡಿ ಮನಗೂಳಿ ಗೆದ್ದಿದ್ದು. ಈ ಬಾರಿ ಬಿಜೆಪಿ ಗೆಲುವು ಸಾಧಿಸಲಿದೆ. ಬಿಜೆಪಿಯ ಜನಪರ ಕಾರ್ಯಕ್ರಮ, ಯೋಜನೆಗಳಿಂದಾಗಿ ಹಾನಗಲ್ ಹಾಗೂ ಸಿಂದಗಿಯಲ್ಲಿ ಮತ ನೀಡುತ್ತಾರೆ. ಮುಂದಿನ ಚುನಾವಣೆಯಲ್ಲೂ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.




Leave a Reply

Your email address will not be published. Required fields are marked *

error: Content is protected !!