ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಕುಮಾರಸ್ವಾಮಿ ಮುಸ್ಲಿಂರನ್ನು ಬಿಡಿ ಒಕ್ಕಲಿಗರನ್ನೇ ಬೆಳೆಯಲು ಬಿಡಲಿಲ್ಲವೆಂದು ಹೇಳಿದ್ದಾರೆ.
ಸ್ವಂತ ಅಣ್ಣ ರೇವಣ್ಣ ಡಿಸಿಎಂ ಆಗುತ್ತಾನೆ ಎಂದು ಅಧಿಕಾರವನ್ನು ಬಿಟ್ಟು ಕೊಡಲಿಲ್ಲ ಎಂದು ಆರೋಪಿಸಿದ್ದು, ನಾನು ಬೆಳೆಯುವುದಕ್ಕೆ ದೇವೇಗೌಡರು ಕಾರಣ. ಅವರ ಒಂದು ಪರ್ಸೆಂಟ್ ಕೂಡಾ ಕುಮಾರಸ್ವಾಮಿ ಆಗುವುದಿಲ್ಲ. 2006ರಲ್ಲಿ ಸಿಎಂ ಆದಾಗ್ಲೂ ಹಾಗೂ 2018ರಲ್ಲಿ ಸಿಎಂ ಆದಾಗ್ಲೂ ನಿಗಮ ಮಂಡಳಿಗಳಿಗೆ ಯಾರನ್ನೂ ನೇಮಿಸಲಿಲ್ಲ ಎಂದು ಜಮೀರ್ ಆರೋಪಿಸಿದ್ದಾರೆ.