ಸಿಂದಗಿ: ತಾಲೂಕಿನ ಮಾಡಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಭೂಮಿಕಾ ದೇವೇಂದ್ರ ನಾಯ್ಕೋಡಿ, ಇನ್ಸ್ ಪಾಯರ್ ಅವಾರ್ಡ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಈ ಮೂಲಕ ತಾಲೂಕಿಗೆ ಹಮ್ಮೆ ತಂದಿದ್ದಾಳೆ.
2019-20ನೇ ಸಾಲಿನ ಇನ್ಸ್ ಪಾಯರ್ ಅವಾರ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿ, ‘ರೈತಮಿತ್ರ’ ಅನ್ನೋ ವಿಜ್ಞಾನ ಪ್ರಾಜೆಕ್ಟ್ ಸಿದ್ಧ ಮಾಡಿದ್ದಾಳೆ. ಇದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ರೈತರು ಬೆಳೆದ ಬೆಳೆಗಳನ್ನ ಸಂರಕ್ಷಣೆ ಮಾಡುವ ಈ ಪ್ರಾಜೆಕ್ಟ್ ಎಲ್ಲರಿಂದ ಮೆಚ್ಚುಗೆ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ವಿದ್ಯಾರ್ಥಿನಿಯ ಸಾಧನೆಗೆ ಮಾರ್ಗದರ್ಶಕ ಶಿಕ್ಷಕರಾದ ಶಶಿಧರ ಹೊನ್ನಳ್ಳಿ, ಮುಖ್ಯಗುರುಗಳಾದ ಎಸ್.ಎಸ್ ಮೊಖಾಶಿ ಹಾಗೂ ಶಿಕ್ಷಕರ ಬಳಗ ಅಭಿನಂದನೆ ಸಲ್ಲಿಸಿದೆ.
ಫೆಬ್ರವರಿಯಲ್ಲಿ ಮಂಡ್ಯದಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭೂಮಿಕಾ ನಾಯ್ಕೋಡಿ ಭಾಗವಹಿಸ್ತಿದ್ದು, ಹೆತ್ತವರು, ಗ್ರಾಮಸ್ಥರು, ವಿದ್ಯಾರ್ಥಿಗಳು ಶುಭ ಕೋರಿದ್ದಾರೆ. ಸಿಂದಗಿ ತಾಲೂಕಿನ ಪ್ರತಿಭೆ ರಾಜ್ಯ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಎಲ್ಲರೂ ಹಾರೈಸಿದ್ದಾರೆ.