ಚಂದನವನದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ ಮತ್ತೆ ಮನೆ ಮಾರುವ ಬಗ್ಗೆ ಮಾತ್ನಾಡಿದ್ದಾರೆ. ಇದಕ್ಕೆ ಕಾರಣವಾಗಿರೋದು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ನಟನೆಯ ಆಯುಷ್ಮಾನ್ ಭವ ಸಿನ್ಮಾ ಸೋತಿರುವುದು.
ನಿರ್ಮಾಪಕ ಜಯಣ್ಣ ಅವರ ಬಳಿ 5 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ದ್ವಾರಕೀಶ ಅವರ ಮಗ ಯೋಗೇಶ ಈ ಚಿತ್ರದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ರು. ಸಿನ್ಮಾವನ್ನ ವಿತರಣೆ ಮಾಡಿದ್ದ ಜಯಣ್ಣ, ಪೈನಾನ್ಸರ್ ಅವರಿಂದ 5 ಕೋಟಿ ರೂಪಾಯಿ ನೀಡಿದ್ದಾರೆ.
ಜಯಣ್ಣ ಹಾಗೂ ರಮೇಶ ಶುಕ್ರವಾರ ಮಧ್ಯಾಹ್ನ ಮನೆಗೆ ಬಂದು ಬಾಯಿಗೆ ಬಂದಂತೆ ಮಾತ್ನಾಡಿದ್ದಾರೆ. ನಿನ್ನ ಮಗನನ್ನ ಉಡೀಸ್ ಮಾಡ್ತೀವಿ ಅಂದಿದ್ದಾರೆ. ನಗೀಗ 78 ವರ್ಷ. ಮನೆಯಲ್ಲಿ ನಾವಿಬ್ಬರು ವಯಸ್ಸಾದವರು ಇದೀವಿ. ಹೀಗೆ ಅವಾಜ್ ಹಾಕಿದ್ದಾರೆ. ಹಣಕಾಸಿನ ವ್ಯವಹಾರ ಏನೇ ಇರ್ಲಿ. ಕಾನೂನು ಮೂಲಕ ಮಾಡಬೇಕಿತ್ತು. ಹೀಗಾಗಿ ನಾವು ದೂರು ನೀಡಿದ್ದೇವೆ ಅಂತಾ ಹೇಳಿದ್ದಾರೆ.
ಈ ಹಿಂದೆ ಬನಶಂಕರಿ ಮನೆ, ಕೋರಮಂಗಲದ ಮನೆ, ಎನ್.ಆರ್ ಕಾಲೋನಿ ಮನೆ ಹೀಗೆ ನಾಲ್ಕೈದು ಮನೆಗಳನ್ನ ಮಾರಿ ಸಿನ್ಮಾಗಾಗಿ ದುಡ್ಡು ಹಾಕಿದ್ದಾರೆ. ಈಗ್ಲೂ ನಾವೂ ಕೊಡುವುದಿಲ್ಲವೆಂದು ಹೇಳಿಲ್ಲ. ಮನೆ ಮಾರಿಯಾದ್ರೂ ಹಣ ನೀಡುತ್ತೇವೆ ಅಂತಾ ಹೇಳಿದ್ದಾರೆ. ಸದ್ಯ ಹೆಚ್.ಎಸ್ ಆರ್ ಲೇಔಟ್ ನಲ್ಲಿ ವಾಸವಾಗಿದ್ದಾರೆ.