ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಕಾಶೀನಾಥ ಪುತ್ರ ಅಭಿಮನ್ಯು ಮರಳಿ ಚಿತ್ರರಂಗಕ್ಕೆ ಬರ್ತಿದ್ದಾರೆ. ಬಾಜಿ ಅನ್ನೋ ಚಿತ್ರಕ್ಕೆ ಹೀರೋ ಆಗಿ ನಟಿಸಿದ್ರು. ಅದು ಸಕ್ಸಸ್ ಕಾಣ್ಲಿಲ್ಲ. ತಂದೆ ಮಗನಿಗೆ ಸಪೋರ್ಟ್ ಆಗಿ ನಿಂತಿದ್ರೂ ಮತ್ತೆ ಬೇರೆ ಸಿನ್ಮಾಗಳು ಬರ್ಲಿಲ್ಲ.
ಇದೀಗ ಮತ್ತೊಂದು ಚಿತ್ರಕ್ಕೆ ರೆಡಿಯಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರದ ಚಿತ್ರಕ್ಕೆ ಓಕೆ ಹೊಂದಿದ್ದಾರೆ. ಮಮ್ಮಿ, ದೇವಕಿ ಚಿತ್ರಗಳ ನಿರ್ದೇಶಕ ಲೋಹಿತ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಕಿರಣ ಸೂರ್ಯ ಆಕ್ಷನ್ ಕಟ್ ಹೇಳ್ತಿದ್ದಾರೆ. ಇದೀಗ ಸ್ಪ್ರಿಪ್ಟ್ ಪೂಜೆ ನಡೆದಿದ್ದು ಟೈಟಲ್ ಲಾಂಚ್ ಮಾಡುವ ಪ್ಲಾನ್ ನಡೆದಿದೆ.