ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕಾಂಗ್ರೆಸ್ ನ ಘರ್ ಘರ್ ಗ್ಯಾರೆಂಟಿ ಯೋಜನೆಯ ಅಭಿಯಾನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬುಧವಾರ ಚಾಲನೆ ನೀಡಿದರು. ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರವಾದ ಉಸ್ಮಾನ್ ಪುರದಿಂದ ಖರ್ಗೆ ಅಭಿಯಾನ ಆರಂಭಿಸಿದರು.
ಅಭಿಯಾನದ ಅಡಿಯಲ್ಲಿ ದೇಶದ 8 ಕೋಟಿ ಮನೆಗಳಿಗೆ ಇದನ್ನು ತಲುಪಿಸುವ ಗುರಿ ಹೊಂದಿದ್ದೇವೆ. ನಮ್ಮ ‘ಪಂಚ ನ್ಯಾಯ ಪಚ್ಚೀಸ್ ಗ್ಯಾರೆಂಟಿ’ ಕಾರ್ಡ್ ವಿತರಿಸುತ್ತೇವೆ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಯೋಜನೆಗಳನ್ನು ಜಾರಿ ಮಾಡಲಾಗುವುದು ಎಂದು ಜನರಿಗೆ ತಿಳಿಸಲಾಗುತ್ತೆ ಎಂದು ಖರ್ಗೆ ಹೇಳಿದರು.