ಪ್ರಜಾಸ್ತ್ರ ಸುದ್ದಿ
ಜಾರ್ಖಂಡ್: ಮನೆಯೊಂದರ ಶೌಚಾಲಯದ ಗುಂಡಿ ನಿರ್ಮಾಣ ಸಂಬಂಧ ಗುಂಡಿಯೊಳಗೆ ಇಳಿದಿದ್ದ 6 ಜನರು ವಿಷಅನಿಲ ಸೇವಿಸಿ ಸಾವನ್ನಪ್ಪಿದ ದಾರುಣ ಘಟನೆ ದೇವಿಪುರದ ಮಾರುಕಟ್ಟೆ ಬಳಿ ನಡೆದಿದೆ.
ಮೃತರನ್ನ 40 ವರ್ಷದ ಮಿಥಲೇಶ, 50 ವರ್ಷದ ಬ್ರಿಜೇಶ, 50 ವರ್ಷದ ಗೋವಿಂದ ಮಾಂಝಿ, ಬಬ್ಲು ಮಾಂಝಿ 30, ಲಾಲು ಮಾಂಝಿ 25, 30 ವರ್ಷದ ಲೇಲು ಮರ್ಮು ಎಂದು ತಿಳಿದು ಬಂದಿದೆ. 20 ಅಡಿ ಆಳ, 7 ಅಡಿ ಅಗಲದ ಶೌಚಾಲಯದ ಗುಂಡಿ ನಿರ್ಮಾಣ ಸಂಬಂಧ ಗುಂಡಿಯೊಳಗೆ ಇಳಿದಾಗ ಈ ದುರಂತ ಸಂಭವಿಸಿದೆ.
ಬಹಳ ಸಮಯವಾದ್ರೂ ಯಾರೂ ಹೊರಗೆ ಬರದಿರುವುದಕ್ಕೆ ಸ್ಥಳೀಯರು ಗುಂಡಿಗೆ ಇಳಿದು ನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಅವರನ್ನ ಮೇಲೆತ್ತಿ ಸದಾರ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ 6 ಜನರ ಜೀವ ಹೋಗಿತ್ತು.