ಮಾಹಿತಿಹಕ್ಕು ಕಾರ್ಯಕರ್ತನ ಮೇಲೆ ಹಲ್ಲೆ: ಸೂಕ್ತ ತನಿಖೆಗೆ ಯಡಹಳ್ಳಿ ಆಗ್ರಹ

445

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಆರ್ ಟಿಐ ಕಾರ್ಯಕರ್ತ ಮಹಾಂತೇಶ ಮಾಳಮ್ಮನವರ ಅನ್ನೋ ಯವಕನ ಮೇಲೆ ಹಲ್ಲೆ ಮಾಡಲಾಗಿದೆ. ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ಶಿವನಗೌಡ ಪಾಟೀಲ ಹಲ್ಲೆ ಮಾಡಿರುವುದಾಗಿ ಹೇಳಲಾಗ್ತಿದೆ.

ಶಿವಾನಂದ ಯಡಹಳ್ಳಿ

ಈ ಘಟನೆಯನ್ನ ಮಾಹಿತಿ ಹಕ್ಕು ಜಾಗೃತಿ ಆಂದೋಲನದ ವಿಜಯಪುರ ಜಿಲ್ಲಾಧ್ಯಕ್ಷರಾದ ಶಿವಾನಂದ ಯಡಹಳ್ಳಿಯವರು ಖಂಡಿಸಿದ್ದಾರೆ. ಅಲ್ದೇ, ಗದಗ ಎಸ್ಪಿ ಅವರ ಜೊತೆ ಮಾತ್ನಾಡಿ, ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ತಪ್ಪಿತಸ್ಥರ ವಿರುದ್ದ ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ಅವರಿಗೆ ಸೂಕ್ತ ಶಿಕ್ಷೆ ನೀಡಬೇಕಾಗಿದೆ. ಪಂಚಾಯತ್ ರಾಜ್ಯ ಸಚಿವ ಕೆ.ಎಸ್ ಈಶ್ವರಪ್ಪನವರು ಮಧ್ಯಸ್ಥಿಕೆ ವಹಿಸಿ, ಆರ್ ಟಿಐ ಕಾರ್ಯಕರ್ತರ ಮೇಲಾಗ್ತಿರುವ ದೌರ್ಜನ್ಯವನ್ನ ತಡೆಯಬೇಕು ಎಂದು ಶಿವಾನಂದ ಯಡಹಳ್ಳಿ ಒತ್ತಾಯಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!