ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಣ್ಣ ನೀರಾವರಿ ಇಲಾಖೆಯ ಇಬ್ಬರು ಅಧಿಕಾರಿಗಳು ಎಸಿಬಿ ಬಲಗೆ ಬಿದ್ದಿದ್ದಾರೆ. ಲಂಚ ಸ್ವೀಕರಿಸುವಾಗ ಇಇ ಎಂ.ಎನ್ ಕಿಶೋರ ಹಾಗೂ ಅಕೌಂಟೆಂಟ್ ಸೂಪರಿಟೆಂಡೆಂಟ್ ದತ್ತಾತ್ರೇಯ ನಾರಾಯಣ ನಾಯ್ಕರ ಸಿಕ್ಕಿಬಿದ್ದಿದ್ದಾರೆ.
25 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಇ ಎಂ.ಎನ್ ಕಿಶೋರ್ ಹಾಗೂ ದತ್ತಾತ್ರೇಯ ನಾರಾಯಣ ನಾಯ್ಕರ 1.5 ಲಕ್ಷ ಹಣ ಸ್ವೀಕರಿಸೋವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಮಂಜೂರಾಗಿದ್ದ ಹಣ ಬಿಡುಗಡೆ ಮಾಡಲು ಈ ಇಬ್ಬರು ಅಧಿಕಾರಿಗಳು ಲಂಚದ ಬೇಡಿಕೆ ಇಟ್ಟಿದ್ದರು. ಎಸಿಬಿ ಅಧಿಕಾರಿಗಳು ಹಣ ಹಾಗೂ ದಾಖಲಾತಿಗಳನ್ನ ವಶಕ್ಕೆ ಪಡೆದಿದ್ದಾರೆ.