ವಿಜಯಪುರದಲ್ಲಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ

476

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಸಹಾಯಕ ಅಭಿವೃದ್ಧಿ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ದಯಾನಂದ ಸಂಗಣ್ಣ ಬಲ್ಲಾಳ ಊರ್ಫ್ ಬಡಿಗೇರ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿ. ಇಂಡಿಯ ಅಂಜುಟಗಿ ನಿವಾಸಿ ಕಾಶಿಬಾಯಿ ಮಡಿವಾಳರ ಎಮ್ಮೆಯನ್ನು ಸಾಕಲು ಸಹಾಯ ಧನ ಮತ್ತು ಸಾಲ ಸೇರಿ 50,000 ಅರ್ಜಿಯನ್ನು ಹಾಕಿ ಫಲಾನುಭವಿಯಾಗಿ ಆಯ್ಕೆಯಾಗಿದ್ದಾರೆ.

ದಾಖಲೆಗಳನ್ನು ಮೇಲಾಧಿಕಾರಿಗಳಿಗೆ ಕಳಿಸಲು ದಯಾನಂದ 5000 ರೂಪಾಯಿ ಲಂಚದ ಬೇಡಿಕೆಗೆಯಿಟ್ಟು 3000 ನಗದು ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿಗೈದು ಆರೋಪಿ ಹಾಗೂ ಹಣವನ್ನು ಜಪ್ತಿಗೈದಿದ್ದಾರೆ. ಈ ಕುರಿತು ವಿಜಯಪುರ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!