ಇಂಡಿಯನ್ ಕ್ರಿಕೆಟ್ ಟೀಂನ ಅನುಭವಿ ಆಟಗಾರ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಆಯ್ಕೆ ಮಾಡಿಲ್ಲ. 3 ಪಂದ್ಯಗಳ ಟಿ-20 ಸರಣಿಗೆ ಧೋನಿ ಬದಲಿಗೆ, ಯುವ ಆಟಗಾರ ರಿಷಭ ಪಂಥರನ್ನ ಆಯ್ಕೆ ಮಾಡಲಾಗಿದೆ.
ಅಂಗಳದಿಂದ ಸ್ವಲ್ಪ ಬಿಡುವು ಮಾಡಿಕೊಂಡು ಪ್ಯಾರಾಚೂಟ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸಿ ಬಂದಿರುವ ಧೋನಿ ಇದೀಗ ಅಮೆರಿಕ ಪ್ರವಾಸದಲ್ಲಿದ್ದಾರೆ. ಹೀಗಾಗಿ ಅವರನ್ನ ಟಿ-20 ಸರಣಿಗೆ ಪರಿಗಣಿಸಿಲ್ಲ ಎನ್ನಲಾಗ್ತಿದೆ. ಆದ್ರೆ, ಧೋನಿ ಅಭಿಮಾನಿಗಳು ಮಾತ್ರ ಇದಕ್ಕೆ ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ.
ಇನ್ನು ಆಲ್ ರೌಂಡರ್ ಹಾರ್ದಿಕ ಪಾಂಡೆ ಟೀಂ ಇಂಡಿಯಾಗೆ ಸೇರಿಕೊಂಡಿದ್ದಾನೆ. ಭುವನೇಶ್ವರಕುಮಾರಗೆ ರೆಸ್ಟ್ ನೀಡಲಾಗಿದೆ. ಉಳಿದಂತೆ ವೆಸ್ಟ್ ಇಂಡೀಸ್ ವಿರುದ್ಧ ಆಡ್ತಿರುವ ತಂಡವನ್ನ ಮುಂದುವರೆಸಲಾಗಿದೆ.