ಸಿಂದಗಿಯ ಶಿಕ್ಷಣ ಇಲಾಖೆ ಕಚೇರಿ ಮುಂದೆ ಹೆಚ್ಡಿಕೆ-ಪರಂ ಬ್ಯಾನರ್

553

ಸಿಂದಗಿ: ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾಗಿ ಒಂದು ತಿಂಗಳು ಮೇಲಾಗಿದೆ. ಇದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷ್ಯ. ಆದ್ರೆ, ಸಿಂದಗಿಯಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿನ ಅಧಿಕಾರಿಗಳಿಗೆ ಮಾತ್ರ ಗೊತ್ತಿಲ್ಲ.

ಪಟ್ಟಣದಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂಭಾಗದಲ್ಲಿ ಹೆಚ್.ಡಿ ಕುಮಾರಸ್ವಾಮಿ ಸಿಎಂ ಮತ್ತು ಡಾ.ಜಿ ಪರಮೇಶ್ವರ ಡಿಸಿಎಂ ಆಗಿದ್ದ ಟೈಂನ ಬ್ಯಾನರ್ ಇನ್ನು ಹಾಗೇ ಬಿಡಲಾಗಿದೆ. ಈ ಬ್ಯಾನರ್ ತೆರವುಗೊಳಿಸುವ ಕೆಲಸ ಮಾತ್ರ ಇನ್ನೂ ಆಗಿಲ್ಲ. ಅದರ ಬಗ್ಗೆ ಇಲ್ಲಿನ ಅಧಿಕಾರಿ, ಸಿಬ್ಬಂದಿ ಗಮನಕ್ಕೆ ಇನ್ನು ಬಂದಿಲ್ಲ ಅನಿಸುತ್ತೆ.

ಹಿಂದಿನ ಮೈತ್ರಿ ಸರ್ಕಾರದ ಬ್ಯಾನರ್

ನಮಗೆ ಮೇಲಿಂದ ಆದೇಶ ಬಂದಿಲ್ಲ. ಹೀಗಾಗಿ ಅದನ್ನು ತೆಗೆದಿಲ್ಲ. ಅಲ್ದೇ ಅದನ್ನು ಕಿತ್ತಲು ನಮಗೆ ಬರುವುದಿಲ್ಲ. ಈಗಿರುವ ಬೋರ್ಡ್ ಮೇಲೆಯೇ ಹೊಸ ಬ್ಯಾನರ್ ಅಂಟಿಸುತ್ತಾರೆ.

ಎಸ್.ಆರ್ ಕೊಣ್ಣೂರಕರ್, ಮ್ಯಾನೇಜರ್

ಇದು ಇಲ್ಲಿನ ಮ್ಯಾನೇಜರ್ ಅವರ ಮಾತು. ಬ್ಯಾನರ್ ಕಿತ್ತಲು ಆಗದೆ ಹೋದ್ರೆ, ಕಡೇ ಪಕ್ಷ ಅದನ್ನ ಮರೆ ಮಾಡುವ ಕೆಲಸವಾದ್ರು ಮಾಡಬೇಕಿತ್ತು. ಯಾವ ಸರ್ಕಾರವಿದೆ. ಯಾವ ಸರ್ಕಾರವಿದ್ದಾಗಿನ ಬೋರ್ಡ್ ಇದೆ ಅನ್ನೋದು ಇಲ್ಲಿರುವವರಿಗೆ ಗೊತ್ತಿರಬೇಕಿತ್ತು. ಯಾಕಂದ್ರೆ, ಇದು ಶಿಕ್ಷಣ ಇಲಾಖೆ. ಇನ್ಮೇಲಾದ್ರೂ ಇದರತ್ತ ಗಮನ ಹರಿಸಿ, ಬ್ಯಾನರ್ ತೆರವುಗೊಳಿಸುವ ಕೆಲಸ ಮಾಡ್ತಾರಾ ಕಾದು ನೋಡಬೇಕು.

ಸಿಂದಗಿಯಲ್ಲಿರುವ ಸರ್ವಾಜನಿಕ ಶಿಕ್ಷಣ ಇಲಾಖೆ ಕಚೇರಿ



Leave a Reply

Your email address will not be published. Required fields are marked *

error: Content is protected !!