ಸಿಂದಗಿ: ಸೋಮವಾರ ಗಣೇಶ ಹಬ್ಬ. ಹೀಗಾಗಿ ಇದೀಗ ಎಲ್ಲಿ ನೋಡಿದ್ರೂ ವಿನಾಯಕನ ಖರೀದಿ ಭರ್ಜರಿಯಾಗಿ ನಡೆದಿದೆ. ವ್ಯಾಪಾರಿಗಳ ಕೆಲಸ ಜೋರಾಗಿಯೇ ಇದೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿನ ಅಂಗಡಿಗಳಲ್ಲಿ ನಾನಾ ಬಗೆಯ ಗಜಮುಖನ ಮೂರ್ತಿಗಳು ಕಂಗೊಳಿಸ್ತಿವೆ.
ಪಟ್ಟಣದ ಹಳೆ ಬಜಾರ್ ರೋಡ್, ಪುರಸಭೆ ರಸ್ತೆ, ವಿವೇಕಾನಂದ ಸರ್ಕಲ್ ರೋಡ್ ಸೇರಿದಂತೆ ಪಟ್ಟಣದ ಅನೇಕ ಅಂಗಡಿಗಳಲ್ಲಿ ಹಬ್ಬದ ಭರಾಟೆ ಜೋರಾಗಿ ಕಂಡು ಬರ್ತಿದೆ. ಗಣೇಶ ಮಂಡಳಿಯ ಸದಸ್ಯರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಬಂದು, ತಮಗೆ ಬೇಕಾಗಿರುವ ಗಣೇಶ ಮೂರ್ತಿಗಳನ್ನು ಮುಂಗಡವಾಗಿ ಬುಕ್ಕಿಂಗ್ ಮಾಡ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ನಿಷೇಧ ಮಾಡಿರುವುದ್ರಿಂದ ವ್ಯಾಪಾರ ಅಷ್ಟಾಗಿಲ್ಲ. ಮಳೆಯಾಗಿರುವುದ್ರಿಂದ ಮಣ್ಣಿನ ಗಣಪತಿ ಬಂದಿಲ್ಲ. ಹೀಗಾಗಿ ಇವುಗಳನ್ನೇ ಮಾರಾಟ ಮಾಡಲಾಗ್ತಿದೆ ಅಂತಿದ್ದಾರೆ ವ್ಯಾಪಾರಸ್ಥರು. ಇನ್ನೊದು ಕಡೆ ಬ್ಯಾನ್ ಮಾಡಿರುವ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ಮಾಡ್ತಿರುವುದಕ್ಕೆ ಪರಿಸರ ಪ್ರೇಮಿಗಳು ಬೇಸರ ವ್ಯಕ್ತಪಡಿಸ್ತಿದ್ದಾರೆ.