ನಾಳೆ ಎಸ್ಎಸ್ಎಲ್ ಸಿ ಫಲಿತಾಂಶ ವದಂತಿ: ಸುರೇಶಕುಮಾರ ಸ್ಪಷ್ಟನೆ

508

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ನಾಳೆ ಬಿಡುಗಡೆಯಾಗಲಿದೆ ಅನ್ನೋ ಸುದ್ದಿ ಎಲ್ಲೆಡೆ ಹಬ್ಬಿದೆ. ಆದ್ರೆ, ಇದು ಸುಳ್ಳು ಎಂದು ಶಿಕ್ಷಣ ಸಚಿವ ಸುರೇಶಕುಮಾರ ಅವರು ತಿಳಿಸಿದ್ದಾರೆ. ಆಗಸ್ಟ್ 7ರಂದು ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಲಾಗ್ತಿದೆ.

ಫಲಿತಾಂಶ ಪ್ರಕಟಿಸಲು ಇನ್ನೂ ದಿನಾಂಕ ನಿಗದಿ ಮಾಡಿಲ್ಲ. ಆಗಸ್ಟ್ ಮೊದಲ ವಾರ ಅಥವ 2ನೇ ವಾರ ಎನ್ನಲಾಗಿತ್ತು. ಆದ್ರೆ, ದಿನಾಂಕ ಇನ್ನೂ ಸ್ಪಷ್ಟಪಡಿಸಿಲ್ಲ. ಹೀಗಾಗಿ ನಾಳೆ ಫಲಿತಾಂಶ ಪ್ರಕಟಣೆ ಅನ್ನೋದು ಸುಳ್ಳು ಎಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!