ಬ್ರೇಕಿಂಗ್ ನ್ಯೂಸ್: ನೇಣಿಗೆ ಶರಣಾದ ಡವಳಾರ ಗ್ರಾಮಸ್ಥ

659

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಡವಳಾರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವ್ಯಕ್ತಿ 48 ವರ್ಷದ ಭೀಮನಗೌಡ ಬಸನಗೌಡ ಖಾನಾಳ ಎಂದು ತಿಳಿದು ಬಂದಿದೆ.

ಗ್ರಾಮದ ಕೆಲವರು ಹೇಳುವ ಪ್ರಕಾರ ಕುಡಿದ ಮತ್ತಿನಲ್ಲಿ ನೇಣು ಹಾಕಿಕೊಂಡಿದ್ದಾನೆ ಅಂತಾರೆ. ಇನ್ನು ಕೆಲವರು 30 ಸಾವಿರ ರೂಪಾಯಿ ಸಾಲದ ವಿಚಾರವಾಗಿ ನೇಣು ಹಾಕಿಕೊಂಡಿದ್ದಾನೆ ಅಂತಾರೆ. ಆದ್ರೆ, ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನೋದರ ಸ್ಪಷ್ಟತೆ ಇಲ್ಲ.

ಎರಡು ಗಂಡು, ಒಂದು ಹೆಣ್ಣು ಸೇರಿದಂತೆ 3 ಮಕ್ಕಳನ್ನ ಹೊಂದಿರುವ ಭೀಮನಗೌಡ, ಲಾರಿ ಡ್ರೈವರ್ ಆಗಿ ಕೆಲಸ ಮಾಡ್ತಿದ್ದನಂತೆ. ಕಳೆದ ಸುಮಾರು 8-10 ವರ್ಷಗಳ ಹಿಂದೆ ಅಪಘಾತದಲ್ಲಿ ಕಾಲಿಗೆ ಸಮಸ್ಯೆಯಾಗಿ, ಮನೆಯಲ್ಲಿ ಇರುತ್ತಿದ್ದ ಎಂದು ಗ್ರಾಮಸ್ಥರು ಹೇಳ್ತಿದ್ದಾರೆ. ಇನ್ನು ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!