ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನಾಳೆ ಭಾನುವಾರ ಬಂದ್ ಇರುತ್ತೆ ಎಂದು ಕೆಲವರು ಹೇಳ್ತಿದ್ದಾರೆ. ಇನ್ನು ಕೆಲವರು ಬಂದ್ ಇರಲ್ಲ. ಸಿಎಂ ಈಗಾಗ್ಲೇ ರಾಜ್ಯದಲ್ಲಿ ಎಲ್ಲಿಯೂ ಲಾಕ್ ಡೌನ್ ಮುಂದುವರಿಕೆ ಇಲ್ಲವೆಂದು ಹೇಳಿದ್ದಾರೆ. ಹೀಗಾಗಿ ನಾಳೆ ಭಾನುವಾರ ಬಂದ್ ಇರಲ್ಲ ಅಂತಿದ್ದಾರೆ. ಇದ್ರಿಂದಾಗಿ ಜನರಲ್ಲಿ ಗೊಂದಲ ಮೂಡಿದೆ.
ಸಿಎಂ ಘೋಷಣೆ ಬಳಿಕ ಜಿಲ್ಲಾವಾರು ಸ್ಥಳೀಯ ಆಡಳಿತ ನೀಡಿದ್ದ ಆದೇಶ ಸಹ ರದ್ದಾಗಿದೆ. ಹೀಗಾಗಿ ಧಾರವಾಡ, ಕಲಬುರಗಿ, ದಕ್ಷಿಣ ಕನ್ನಡ ಭಾಗದಲ್ಲಿಯೂ ಸ್ಥಳೀಯ ಲಾಕ್ ಡೌನ್ ಮಾಡಿದ್ರೂ ಅದೆಲ್ಲವೂ ರದ್ದಾಗಿದೆ. ಅದು ಭಾನುವಾರದ ಬಂದ್ ಗೂ ಅನ್ವಿಸುತ್ತೆ. ಹೀಗಾಗಿ ಬಂದ್ ಇರಲ್ಲವೆಂದು ಕೆಲವರು ಹೇಳ್ತಿದ್ದಾರೆ. ಇದರಲ್ಲಿ ಯಾವುದು ಸತ್ಯ ಅನ್ನೋ ಗೊಂದಲದಲ್ಲಿ ರಾಜ್ಯದ ಜನತೆ ಸಿಲುಕಿದ್ದಾರೆ.