ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ: ನಗರದ ರೈಲು ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಎರಡು ಅನುಮಾನಸ್ಪದ ವಸ್ತುಗಳು ಭಾನುವಾರ ಪತ್ತೆಯಾಗಿವೆ. ಇದರಿಂದಾಗಿ ಸಾಕಷ್ಟು ಆತಂಕ ಮೂಡಿತ್ತು. ಈ ಬಗ್ಗೆ ಸೋಮವಾರ ಎಸ್ಪಿ ಮಿಥುನ್ ಕುಮಾರ್ ಮಾತನಾಡಿದ್ದಾರೆ.
ಅನುಮಾನಸ್ಪದ ವಸ್ತುಗಳ ಪತ್ತೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಬೆಂಗಳೂರಿನಿಂದ ಬಾಂಬ್ ಪತ್ತೆ ಹಾಗೂ ನಿಷ್ಕ್ರೀಯ ದಳ ಕರೆಸಲಾಗಿತ್ತು. ಎಲ್ಲವೂ ಪರಿಶೀಲಿಸಿದ್ದು, ಸ್ಫೋಟಕ ವಸ್ತುಗಳು ಕಂಡು ಬಂದಿಲ್ಲ. ಉಪ್ಪು ಹಾಗೂ ಪ್ಲ್ಯಾಸ್ಟಿಕ್ ಪತ್ತೆಯಾಗಿದೆ. ಈ ಬಾಕ್ಸ್ ಇಟ್ಟವರಲ್ಲಿ ಇಬ್ಬರು ಕ್ರಿಮಿನಲ್ ಹಿನ್ನಲೆಯುಳ್ಳವರಾಗಿದ್ದಾರೆ ಎಂದರು.
ರಾತ್ರಿ 8 ಗಂಟೆಯಿಂದ ಬೆಳಗಿನಜಾವ 5 ಗಂಟೆಯ ತನಕ ಕಾರ್ಯಾಚರಣೆ ನಡೆಸಲಾಯಿತು. ಮೊದಲು ಸ್ಕ್ಯಾನ್ ಮಾಡಿ ನೋಡಲಾಯಿತು. ಅದು ಸಾಧ್ಯವಾಗದೆ ಹೋದಾಗ ಸ್ಫೋಟಿಸಿ ನೋಡಲಾಯಿತು. ಆಗ ಬಿಳಿ ಬಣ್ಣದ ಪುಡಿ ಪತ್ತೆಯಾಗಿದೆ. ಇದನ್ನು ಬೆಂಗಳೂರಿನ ಎಫ್ಎಸ್ಎಲ್ ಲ್ಯಾಬ್ ಗೆ ಕಳುಹಿಸಲಾಗಿದೆ ಅಂತಾ ಹೇಳಿದರು.