ವಿದ್ಯಾಕಾಶಿಯಲ್ಲಿ ಸರಗಳ್ಳತನ.. ಮಹಿಳೆಯರೇ ಹುಷಾರ್!

595

ಪ್ರಜಾಸ್ತ್ರ ಅಪರಾಧ ಸುದ್ದಿ

ಧಾರವಾಡ: ವಾಯುವಿಹಾರಕ್ಕೆ ಬಂದಿದ್ದ ಮಹಿಳೆಯರಿಬ್ಬರ ಚಿನ್ನದ ಸರಗಳನ್ನು ಕಳ್ಳರು ಕಿತ್ತುಕೊಂಡು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ. ಅಚ್ಚರಿಯ ವಿಚಾರ ಏನಪ್ಪ ಅಂದರೆ, ಬೈಕ್ ಮೇಲೆ ಪೊಲೀಸ್ ಎಂದು ಬರೆಯಲಾಗಿದೆ. ಹೀಗಾಗಿ ಸಾರ್ವಜನಿಕರಲ್ಲಿ ಸಾಕಷ್ಟು ಅನುಮಾನಗಳು ಮೂಡಿವೆ.

ಶೀನಗರದಲ್ಲಿ ವಾಯುವಿಹಾರಕ್ಕೆ ಬಂದಿದ್ದ ಮಹಿಳೆಯೊಬ್ಬರ ಕೊರಳಲ್ಲಿನ 4.50 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಅಲ್ದೇ, ಶಹರ ಠಾಣೆ ವ್ಯಾಪ್ತಿಯ ಹೊಸಯಲ್ಲಾಪುರದಲ್ಲಿ ಸಹ ವೇದಾ ಬಿಜಾಪೂರ ಅನ್ನೋ ಮಹಿಳೆಯ ಕೊರಳಲ್ಲಿದ್ದ 3.50 ಗ್ರಾಂ ತೂಕದ ಸರ ಎಗರಿಸಿದ್ದಾರೆ.

ಕದ್ದ ಬೈಕ್ ಗಳನ್ನೇ ಸರಗಳತನಕ್ಕೆ ಬಳಕೆಯಾಗುತ್ತಿವೆ ಅನ್ನೋ ಅನುಮಾನ ಮೂಡಿದೆ. ಅಲ್ದೇ, ಬೈಕ್ ಮೇಲೆ ಪೊಲೀಸ್ ಎಂದು ಬರೆದು ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ನಡೆದಿದ್ಯಾ ಗೊತ್ತಿಲ್ಲ. ಈ ಸರಗಳ್ಳತನದ ಬಗ್ಗೆ ಶಹರ ಹಾಗೂ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿವೆ.




Leave a Reply

Your email address will not be published. Required fields are marked *

error: Content is protected !!