ಪ್ರಜಾಸ್ತ್ರ ಸುದ್ದಿ
ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗಂಗೂರು ಬಳಿ ಕಾರೊಂದು ಪಲ್ಟಿಯಾಗಿದೆ. ಐವರು ಸ್ನೇಹಿತರು ಕೂಡಿಕೊಂಡು ಹೊರಟಿದ್ದ ಕಾರು ನಿಯಂತ್ರಣ ತಪ್ಪಿ ಅಪಘಾತಕ್ಕಿಡಾಗಿದೆ. ಇದರಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಯುವಕರು ದೇವರಹಿಪ್ಪರಗಿ ತಾಲೂಕಿನವರೆಂದು ತಿಳಿದು ಬಂದಿದೆ. ಬೈಕ್ ಕೊಟ್ಟು ವಾಪಸ್ ಬರುವಾಗಿ ಅಪಘಾತ ಸಂಭವಿಸಿದೆ.