ಸಾವಳಗಿ, ಕುರುಗೋಡನಲ್ಲಿ ಭರ್ಜರಿ ಕಳ್ಳತನ

412

ಪ್ರಜಾಸ್ತ್ರ ಅಪರಾಧ ಸುದ್ದಿ

ಜಮಖಂಡಿ: ತಾಲೂಕಿನ ಸಾವಳಗಿ ಗ್ರಾಮದ ಸುರೇಶ ದರೆಪ್ಪ ಅಕ್ಕಿವಾಡ ಇವರ ತೋಟದ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಮನೆಯಲ್ಲಿದ್ದ ಸುಮಾರು 1,98,750 ರೂಪಾಯಿ ಬೆಲೆಬಾಳುವ ಬಂಗಾರ ಆಭರಣವನ್ನ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಕುರುಗೋಡ ಗ್ರಾಮದ ಮಲ್ಲಪ್ಪ ವಜ್ರವಾಡ ಇವರ ಮನೆಯ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟೇಲರನ್ನ ಸಹ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿದ ಜಮಖಂಡಿ ಸಿಪಿಐ ಡಿ ಕೆ ಪಾಟೀಲ, ಸಾವಳಗಿ ಪಿಎಸೈ ಎಸ್.ಎಸ್. ಘಾಟಗೆ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಸಾವಳಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!