ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸಿನಿಮಾ ಸ್ಟಾರ್ಸ್ ಅಂದ್ರೆ ಸಾಕು ಅವರ ಅಭಿಮಾನಿಗಳು ಎಲ್ಲದಕ್ಕೂ ಸೈ ಅಂತಾರೆ. ಕೆಲವೊಮ್ಮೆ ಅದು ಎಂಥಾ ಅನಾಹುತಕ್ಕೆ ಕಾರಣವಾಗುತ್ತೆ ಅನ್ನೋದಕ್ಕೆ ಇದೆ ಸಾಕ್ಷಿ. ಇಂದು ಟಾಲಿವುಡ್ ಪವರ್ ಸ್ಟಾರ್ ಪವನ ಕಲ್ಯಾಣ ಅವರ ಹುಟ್ಟು ಹಬ್ಬ. ಹೀಗಾಗಿ ಅವರ ಕಟೌಟ್ ನಿಲ್ಲಿಸಲು ಹೋಗಿ ಮೂವರು ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ.
ಚಿತ್ತೂರು ಜಿಲ್ಲೆ ಶಾಂತಿಪುರಂ ತಾಲೂಕಿನ ಕನಮಲದೊಡ್ಡಿ ಗ್ರಾಮದಲ್ಲಿ ಪವನ ಕಲ್ಯಾಣ ಅಭಿಮಾನಿಗಳು 40 ಅಡಿ ಎತ್ತರದ ಕಟೌಟ್ ಹಾಕಲು ಹೋಗಿ ವಿದ್ಯುತ್ ತಂತಿ ತಗುಲಿ ಮೂವರು ಸಾವನ್ನಪ್ಪಿದ್ದಾರೆ. ಅರುಣಾಚಲಂ(28), ಸೋಮಶೇಖರ(30) ಹಾಗೂ ರಾಜಶೇಖರ(32) ಅನ್ನೋ ಅಭಿಮಾನಿಗಳಿಗೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ.
ಒಟ್ಟು 7 ಜನ ಕಟೌಟ್ ಹಾಕಲು ಪ್ರಯತ್ನಿಸಿದ್ರು. ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಪವನ ಕಲ್ಯಾಣ ಸಂತಾಪ ಸೂಚಿಸಿದ್ದು, ಜನ ಸೇನಾ ಪಕ್ಷದಿಂದ ತಲಾ 2 ಲಕ್ಷ ರೂಪಾಯಿ ಘೋಷಣೆ ಮಾಡಿದ್ದಾರೆ. ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ತೆಲುಗು ಸಿನಿಮಾ ಮಂದಿ ವಿಷಾದ ವ್ಯಕ್ತಪಡಿಸಿದ್ದಾರೆ. ಅಭಿಮಾನ ಅನ್ನೋದು ಮಿತಿಮೀರಿದ್ರೆ ಏನಾಗುತ್ತೆ ಅನ್ನೋದಕ್ಕೆ ಇದೆ ಸಾಕ್ಷಿ.