ಪವನ್ ಕಲ್ಯಾಣ್ ಗೃಹ ಬಂಧನ!

207

ಪ್ರಜಾಸ್ತ್ರ ಸುದ್ದಿ

ವಿಶಾಖಪಟ್ಟಣ: ನಟ ಹಾಗೂ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ವಿಶಾಖಪಟ್ಟಣ ರ್ಯಾಲಿ ಹಂಸಾಚಾರಕ್ಕೆ ತಿರುಗಿದೆ. ಹೀಗಾಗಿ ಜನಸೇನಾ ನಾಯಕರನ್ನು, ಅನೇಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಪವನ್ ಕಲ್ಯಾಣ್ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

ಶನಿವಾರ ಗಲಭೆಯ ನಡುವೆ ರ್ಯಾಲಿ ನಡೆಯಿತು. ಪವರ್ ಕಟ್ ಮಾಡಲಾಯಿತು. ಈ ವೇಳೆ ಮೊಬೈಲ್ ಟಾರ್ಚ್ ಮೂಲಕ ರ್ಯಾಲಿ ಸಾಗಿದೆ. ಸಚಿವರ ಮೇಲೆ ವಿಮಾನ ನಿಲ್ದಾಣದಲ್ಲಿ ಜನಸೇನಾ ಕಾರ್ಯಕರ್ತರು ದಾಳಿ ಮಾಡುವ ಮೂಲಕ ಗಲಭೆ ತೀವ್ರ ಸ್ವರೂಪ ಪಡೆದುಕೊಂಡಿತು.

ಪೊಲೀಸರ ವರ್ತನೆಯನ್ನು ಖಂಡಿಸಿರುವ ಪವನ್ ಕಲ್ಯಾಣ್, ತಮ್ಮ ಪಕ್ಷದ ನಾಯಕರನ್ನು, ಕಾರ್ಯಕರ್ತರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಇಲ್ಲದೆ ಹೋದರೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಈಗ ಪವನ್ ತಂಗಿದ್ದ ಹೋಟೆಲ್ ನಲ್ಲಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆಯಂತೆ.




Leave a Reply

Your email address will not be published. Required fields are marked *

error: Content is protected !!