ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕರೋನಾ ಸೋಂಕಿನ ಪ್ರಕರಣ ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆಯನ್ನ ರಾಜ್ಯಪಾಲ ವಜುಭಾಯ್ ವಾಲಾ ಅಧ್ಯಕ್ಷತೆಯಲ್ಲಿ ನಡೆದಿದೆ. ಇದಕ್ಕೆ ಕಿಡಿ ಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಇದೊಂದು ಸವಿಂಧಾನ ಬಾಹಿರ ಸಭೆ ಎಂದಿದ್ದಾರೆ.
ಆಡಳಿತದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡುವುದು ಸಂವಿಧಾನ ಬಾಹಿರ ಎಂದರು. ಕೋವಿಡ್ 2ನೇ ಅಲೆ ಎದ್ದಿದೆ. ಈ ಮೊದ್ಲೇ ಸರ್ವಪಕ್ಷ ಸಭೆ ಕರೆಯಲಿಲ್ಲ. ಜಾತ್ರೆ, ಸಮಾರಂಭಗಳಿಗೆ ಮೊದ್ಲೇ ನಿರ್ಬಂಧ ಹೇರಬೇಕಿತ್ತು. ಉಪ ಚುನಾವಣೆಯಲ್ಲಿ ನಾವೆಲ್ಲ ಭಾಗವಹಿಸಿದ್ವು. ಚುನಾವಣೆ ನಡೆಯದಿದ್ರೆ ಸಂವಿಧಾನ ಬಿಕ್ಕಟ್ಟು ಆಗ್ತಿರ್ಲಿಲ್ಲ. ಈ ಬಗ್ಗೆ ಪ್ರಧಾನಿಯೂ ಗಮನ ಹರಿಸಿಲ್ಲವೆಂದು ಕಿಡಿ ಕಾರಿದರು.