ರಾಜ್ಯದಲ್ಲಿ ಲಾಕ್ ಡೌನ್..? ಕೆಲವೇ ಕ್ಷಣಗಳಲ್ಲಿ ಆದೇಶ..

280

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಭಾರೀ ಪ್ರಮಾಣದಲ್ಲಿ ಏರಿಕೆಯಾಗ್ತಿರುವ ಕಾರಣ, ಮತ್ತೆ ಲಾಕ್ ಡೌನ್ ಚರ್ಚೆ ಜೋರಾಗಿದೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಸೋಂಕು ಹೆಚ್ಚಾಗಿದ್ದು ಲಾಕ್ ಡೌನ್ ಆಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಈ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ ಮಾತ್ನಾಡಿದ್ದಾರೆ.

ತಜ್ಞರ ಸಮಿತಿಯ ಸಲಹೆ ಪಡೆಯಲಾಗಿದೆ. ವಿಪಕ್ಷಗಳ ನಾಯಕ ಸಲಹೆ ಸೂಚನೆಗಳನ್ನ ಸಹ ಸ್ವೀಕರಿಸಲಾಗಿದೆ. ಇದೆಲ್ಲವನ್ನ ಪರಿಗಣಿಸಿ ಯಾವ ತೀರ್ಮಾನ ತೆಗೆದುಕೊಳ್ಳಬೇಕು? ಹೇಗಿರಬೇಕು? ಜನರ ಸಮಸ್ಯೆಯಾಗದಂತೆ ನಿರ್ಧಾರ ತೆಗೆದುಕೊಂಡು ಕರೋನಾ ಕಂಟ್ರೋಲ್ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಲಾಕ್ ಡೌನ್ ಆಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಒಂದು ವೇಳೆ ಲಾಕ್ ಡೌನ್ ಘೋಷಿಸಿದ್ರೆ, ಎಲ್ಲಿಂದ ಎಲ್ಲಿಯವರೆಗೆ, ಏನಿಲ್ಲ ಮಾರ್ಗಸೂಚಿಗಳನ್ನ ಸೂಚಿಸಲಾಗುತ್ತೆ ಅನ್ನೋದರ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!