ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಸಧ್ಯ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಆಡಳಿತ ಪಕ್ಷ, ವಿಪಕ್ಷಗಳ ನಡುವೆ ಅಧಿಕಾರಕ್ಕಾಗಿ ಗುದ್ದಾಟ ನಡೆಯುತ್ತಿದೆ. ಇದರ ನಡುವೆ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಮಹಿಳೆಗೆ ಸಿಎಂ ಆಗುವ ಯೋಗ ಇದೆ ಎಂದು ಹೇಳಿದ್ದಾರೆ.
ಸ್ವಾಮೀಜಿ ಹೇಳಿಕೆ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿ ಏರುವ ಏಕೈಕ ಸಚಿವೆ ಅಂದರೆ ಅದು ಲಕ್ಷ್ಮಿ ಹೆಬ್ಬಾಳ್ಕರ್ ಮಾತ್ರ. ಉಳಿದಂತೆ ಬೆರಳೆಣಿಕೆಯಷ್ಟು ಶಾಸಕಿಯರು ಇದ್ದಾರೆ. ಹೀಗಿರುವಾಗ ಸಿಎಂ ಆಗುವ ಅವಕಾಶ ಯಾವ ಮಹಿಳಾ ನಾಯಕಿಗೆ ಬರಲಿದೆ ಅನ್ನೋ ಕುತೂಹಲವಿದೆ.
ಇನ್ನು ಜಗತ್ತಿನಲ್ಲಿ ದೊಡ್ಡ ಅನಾಹುತಗಳು ಸೃಷ್ಟಿಯಾಗಲಿವೆಯಂತೆ. ಎರಡು ದೇಶಗಳ ಸರ್ವನಾಶವಾಗುತ್ತವೆ. ಭೂಕಂಪನದಿಂದ ದೊಡ್ಡ ದೊಡ್ಡ ನಗರಗಳಿಗೆ ಅಪಾಯವಿದೆ. ಭಾರತಕ್ಕೆ ಜಲಪ್ರಳಯದ ಕಂಟಕವಿದೆ. ವಿಷಅನಿಲ ಎಲ್ಲಡೆ ಹರಡಿಲಿದ್ದು, ಭಾರತದ ಮೇಲೂ ಇದರ ಪರಿಣಾಮ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.