ದಾವಣಗೆರೆ: ಮೈತ್ರಿ ಸರ್ಕಾರಕ್ಕೆ ಹೆಚ್ಚು ಆಯುಷ್ಯವಿಲ್ಲ ಅಂತಾ ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಜಿ ಪುನರುಚ್ಚರಿಸಿದ್ದಾರೆ.
‘ಬಿತ್ತಿದ ಬೆಳೆಸು ಪರರು ಕೊಯ್ದಾರು. ಹಂಚಿದ ಬೀಜ ಒಂದು, ಬೆಳೆದ ಫಸಲು ಇನ್ನೊಂದು ಎಂದು ನಾನು ಕಳೆದ ವಿಧಾನಸಭೆ ಚುನಾವಣೆಪೂರ್ವದಲ್ಲಿ ಹೇಳಿದ್ದೆ. ಒಂದು ವರ್ಷದಿಂದ 18 ತಿಂಗಳ ಒಳಗೆ ಮತ್ತೆ ವೋಟ್ ಕೇಳ್ತಾರೆ ಅಂತಾ ನಾನು ಆಗ ಹೇಳಿದ್ದೆ. ಈಗ್ಲೂ ಅದನ್ನೇ ಹೇಳುತ್ತಿದ್ದೇನೆ ಅಂತಾ ತಿಳಿಸಿದ್ದಾರೆ.
ಇನ್ನು ಈ ವರ್ಷ ಮಳೆ ಕೊರತೆಯಾಗುವುದಿಲ್ಲ. ಗಾಳಿ ಹೋದ್ಮೇಲೆ ಮಳೆ ಬರುತ್ತೆ ಅಂತಾ ಕೋಡಿಮಠ ಶ್ರೀಗಳು ಇದೇ ವೇಳೆ ತಿಳಿಸಿದ್ದಾರೆ.