ಪ್ರಜಾಸ್ತ್ರ ಸುದ್ದಿ
ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಭಾನುವಾರ ಕಾರ್ಯಕಾರಿ ಸಮಿತಿ ಪ್ರಕಟಿಸಿದ್ದಾರೆ. ಇದರಲ್ಲಿ ಹೊಸಬರು, ಯುವ ಪಡೆಗೆ ಅವಕಾಶ ಕಲ್ಪಿಸಲಾಗಿದೆ. ಸಿಡಬ್ಲುಸಿಗೆ ಚುನಾವಣೆ ನಡೆಸದಿರಲು ಕಳೆದ ಫೆಬ್ರವರಿಯಲ್ಲಿ ಚಾಲನಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಭಾನುವಾರ ಸಮತಿಗೆ ನಾಮನಿರ್ದೇಶನ ಮಾಡುವ ಮೂಲಕ ಅನೇಕರಿಗೆ ಅವಕಾಶ ಕಲ್ಪಿಸಲಾಗಿದೆ. 39 ಜನ ಸದಸ್ಯರು, 18 ಜನ ಪೂರ್ವಭಾವಿ ಆಹ್ವಾನಿತರು, 14 ಜನ ಉಸ್ತುವಾರಿಗಳು, 9 ಜನ ವಿಶೇಷ ಆಹ್ವಾನಿತರು ಹಾಗೂ 4 ಜನ ಕಚೇರಿ ಸದಸ್ಯರನ್ನು ನೇಮಿಸಿ ಪ್ರಕಟಣೆ ಹೊರಡಿಸಲಾಗಿದೆ.