ಪ್ರಜಾಸ್ತ್ರ ಸುದ್ದಿ
ಸಿಂದಗಿ: ಅಂಧ ಶ್ರದ್ಧೆ, ಮೌಢ್ಯತೆಯಲ್ಲಿ ಮುಳುಗಿ ಹೋಗಿದ್ದ ಕೇರಳದ ಜನರನ್ನ ಸರಿ ದಾರಿಗೆ ತರಲು ತಮ್ಮ ತತ್ವ ಬೋಧನೆಯನ್ನ ಅಸ್ತ್ರವನ್ನಾಗಿ ಮಾಡಿಕೊಂಡ ಬ್ರಹ್ಮಶ್ರೀ ನಾರಾಯಣಗುರು ಅವರ ಜಯಂತಿಯನ್ನ ಸರಳವಾಗಿ ಆಚರಿಸಲಾಯ್ತು.
ಪಟ್ಟಣದ ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಂಜೀವಕುಮಾರ ದಾಸರ ಹಾಗೂ ಸಮಾಜದ ಮುಖಂಡರು ಫೋಟೋ ಪೂಜೆ ಮಾಡಿದ್ರು. ಈ ವೇಳೆ ಮಾತ್ನಾಡಿದ ತಹಶೀಲ್ದಾರ್ ಅವರು, ಕೋವಿಡ್ 19 ಹಿನ್ನೆಲೆಯಲ್ಲಿ ಸರಳವಾಗಿ ನಾರಾಯಣಗುರು ಅವರ ಜಯಂತಿ ಆಚರಿಸಲಾಗ್ತಿದೆ. ಈ ಬಗ್ಗೆ ಸಮಾಜದ ಮುಖಂಡರಲ್ಲಿ ಮನವಿ ಮಾಡಲಾಗಿತ್ತು. ಅದಕ್ಕೆ ಅವರು ಸ್ಪಂದಿಸಿದ್ದು, ಅವರಿಗೆ ಧನ್ಯವಾದಗಳು ಎಂದು ತಿಳಿಸಿದ್ರು.
ಈ ವೇಳೆ ತಾಲೂಕು ಆಡಳಿತ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ, ಈಡಿಗ ಸಮಾಜದ ಅಧ್ಯಕ್ಷರಾದ ತಮ್ಮಣ್ಣ ಈಳಗೇರ, ಉದ್ಯಮಿ ಸಚಿನ ಬೀಳಗಿ, ಬಸವರಾಜ ಬಾಗೇವಾಡಿ, ನರಸಯ್ಯ ಈಳಗೇರ, ಅರವಿಂದ ಈಳಗೇರ ಸೇರಿದಂತೆ ಅನೇಕರು ಭಾಗವಹಿಸಿದ್ರು.