ಪ್ರಜಾಸ್ತ್ರ ಸುದ್ದಿ
ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ಸಿಡಿಲಿಗೆ 15 ಕುರಿಗಳ ಸಾವು ಸಾವನ್ನಪ್ಪಿವೆ. ಅಂದಾಜು ಸುಮಾರು 1 ಲಕ್ಷಕ್ಕೂ ಅಧಿಕ ಮೌಲ್ಯದ ಕುರಿಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.
ರೈತ ಮಡಿವಾಳಪ್ಪ ಈರಪ್ಪ ಹಿರೇಕುರುಬರ ಎಂಬುವರ 30 ಕುರಿಗಳಲ್ಲಿ 15 ಕುರಿಗಳು ಮೃತಪಟ್ಟಿವೆ. ಇದ್ರಿಂದಾಗಿ ರೈತ ಮಡಿವಾಳಪ್ಪ ಕಂಗಾಲಾಗಿದ್ದಾರೆ. ಹೀಗಾಗಿ ಸರ್ಕಾರ ತಮ್ಗೆ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.