ಸಚಿವ ಶ್ರೀರಾಮುಲು ಎದುರೇ ವಿಷ ಸೇವಿಸಿದ ಸ್ವಾಮೀಜಿ

266

ಪ್ರಜಾಸ್ತ್ರ ಸುದ್ದಿ

ಚಿತ್ರದುರ್ಗ: ಸಚಿವರ ಶ್ರೀರಾಮುಲು ಎದುರೇ ಸ್ವಾಮೀಜಿಯೊಬ್ಬರು ವಿಷ ಕುಡಿದ ಘಟನೆ ಇಲ್ಲಿನ ಬಿಜೆಪಿ ಕಚೇರಿ ಎದುರು ನಡೆದಿದೆ. ಯೋಗವನ ಬೆಟ್ಟದ ಪೀಠಾಧ್ಯಕ್ಷ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬೇಸರೊಂಡ ತಿಪ್ಪೇರುದ್ರ ಸ್ವಾಮೀಜಿ ವಿಷ ಸೇವಿಸಿದ್ದಾರೆ.

ಹಣ ಬಲ ಹಾಗೂ ಅಧಿಕಾರದ ಬಲದಿಂದ ಪೀಠಾಧ್ಯಕ್ಷ ಸ್ಥಾನ ತಪ್ಪಿಸಲಾಗಿದೆ. ಮಾಜಿ ಶಾಸಕ ಎಸ್.ಕೆ ಬಸವರಾಜನ್ ಹಾಗೂ ಯೋಗವನದ ಬಸವಕುಮಾರ ಸ್ವಾಮೀಜಿ ವಿರುದ್ಧ ಎಂದು ಶರಣರ ಸುಜ್ಞಾನ ಮಂಟಪದ ತಿಪ್ಪೇರುದ್ರ ಸ್ವಾಮೀಜಿ ಆರೋಪಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಸ್ವಾಮೀಜಿಯನ್ನ ಸಚಿವ ಶ್ರೀರಾಮುಲು ತಪ್ಪಿಸಿದ್ದಾರೆ. ತಕ್ಷಣ ಅವರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!