ಟಿಪ್ಪು ಜಯಂತಿ ರದ್ದು ವಿರೋಧಿಸಿ ಸಿಂದಗಿಯಲ್ಲಿ ಪ್ರತಿಭಟನೆ

476

ಸಿಂದಗಿ: ಟಿಪ್ಪು ಸುಲ್ತಾನ್ ಜಯಂತಿ ರದ್ದು ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯ್ತು. ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯ್ತು.

ಈ ವೇಳೆ ಮಾತ್ನಾಡಿದ ದಲಿತ ಮೈನಾರಿಟಿ ಸೇನೆ ರಾಜ್ಯ ಉಪಾಧ್ಯಕ್ಷ ಮಹೀಬೂಬ ಸಿಂದಗಿಕರ್, ಭ್ರಷ್ಟ, ಕೋಮುವಾದಿ ಬಿಜೆಪಿ ಸರ್ಕಾರಕ್ಕೆ ಟಿಪ್ಪು ಜಯಂತಿ ಆಚರಣೆ ಮಾಡುವ ನೈತಿಕತೆಯಿಲ್ಲ. ಒಂದು ವೇಳೆ ಅವರು ಟಿಪ್ಪು ಜಯಂತಿ ಮಾಡಿದ್ರೆ ನಾವೇ ಅದನ್ನ ವಿರೋಧಿಸ್ತೀವಿ ಅಂತಾ ಹೇಳಿದ್ರು. ಇದೇ ವೇಳೆ ಬಿಎಸ್ಪಿ ಮಾಜಿ ಜಿಲ್ಲಾಧ್ಯಕ್ಷ ವೀರುಪಾಕ್ಷ ಗುಬ್ಬೇವಾಡ ಮಾತ್ನಾಡಿ, ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಸರ್ಕಾರ ಜಯಂತಿ ಮಾಡದಿದ್ರೆ ಏನಂತೆ, ನಾವು ಮಾಡುತ್ತೇವೆ ಅಂತಾ ಹೇಳಿದ್ರು.

ಇನ್ನು ಪ್ರತಿಭಟನಾ ಸ್ಥಳದಲ್ಲಿ ಮುಂಜಾಗ್ರತ ಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿತ್ತು. ಬಿಎಸ್ಪಿ ಜಿಲ್ಲಾಧ್ಯಕ್ಷ ರಾಜು ಮಾದರ, ಸಂತೋಷ ಮಣಗಿರಿ, ಮಹ್ಮದ ಪಟೇಲ ಬಿರಾದರ, ರಾಜು ಗುಬ್ಬೇವಾಡ, ವೈ.ಸಿ ಮೈಯೂರ, ಮಹೇಶ ಬಿಸನಾಳ, ಸಲೀಂ ಜುಮನಾಳ, ಪರುಶುರಾಮ ಕಾಂಬ್ಳೆ, ಮೋದಿನ ಶಾಹಬಾದಿ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!