ವಿಜಯಪುರ: ಟಿಪ್ಪು ಜಯಂತ ರದ್ದು ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನ ಖಂಡಿಸಿ, ಟಿಪ್ಪು ಕ್ರಾಂತಿ ಸೇನೆ ನಗರ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯ್ತು. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ರು.
ಬಿ.ಎಸ್ ಯಡಿಯೂರಪ್ಪ ನೇತೃತ್ವದ ಕ್ರಮವನ್ನ ಖಂಡಿಸಿದ ಮುಖಂಡರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ರು. ಇನ್ನು ಪ್ರತಿಭಟನೆ ಬಳಿಕ ಹುಚ್ಚುವರಿ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯ್ತು.
ಪ್ರತಿಭಟನೆ ವೇಳೆ ಟಿಪ್ಪು ಕ್ರಾಂತಿ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದಸ್ತಗೀರ ಮುಲ್ಲಾ, ಟಿಪ್ಪು ಕ್ರಾಂತಿ ಸೇನೆ ಉತ್ತರ ಕರ್ನಾಟಕದ ಅಧ್ಯಕ್ಷ ರಾಜಾಕ ನಾಟಿಕಾರ, ಜಿಲ್ಲಾ ಅಧ್ಯಕ್ಷ ರಿಜ್ವಾನ ಅಹಮದ್ ಮುಲ್ಲಾ, ಸಿಂದಗಿ ತಾಲೂಕ ಅಧ್ಯಕ್ಷ ಕಾಸಿಂ ನಾಯಿಕೊಡಿ, ದಲಿತ ಮುಖಂಡ ರಾಜು ಮಾದರ ಹಾಗೂ ಜಿಲ್ಲೆಯ ಹಲವು ತಾಲೂಕು, ಗ್ರಾಮ ಘಟಕದ ಪದಾಧಿಕಾರಿಗಳು ಹಾಜರಿದ್ರು.