ಟಿಪ್ಪು ವಿಚಾರಕ್ಕೆ ಸಂಸದೆ ಸುಮಲತಾ ಹೇಳಿದ್ದೇನು?

405

ಮಂಡ್ಯ: ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಇತಿಹಾವನ್ನ ತೆಗೆದು ಹಾಕುವ ಕುರಿತು ರಾಜ್ಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಬಿಜೆಪಿ ಸರ್ಕಾರ ಟಿಪ್ಪು ವಿಚಾರವನ್ನ ತೆಗೆದು ಹಾಕಿಯೇ ಸಿದ್ಧವೆಂದು ಹೇಳ್ತಿದೆ. ಇದಕ್ಕೆ ಕಾಂಗ್ರೆಸ್ ಸೇರಿದಂತೆ ವಿಚಾರವಾದಿಗಳು, ಪ್ರಗತಿಪರರು ವಿರೋಧ ವ್ಯಕ್ತಪಡಿಸ್ತಿದ್ದಾರೆ. ಅದೇ ರೀತಿ ಸಂಸದೆ ಸುಮಲತಾ ಅಂಬರೀಶ ಸಹ ಇದು ಸರಿಯಾದ ನಿರ್ಧಾರವಲ್ಲ ಎಂದಿದ್ದಾರೆ.

ಇತಿಹಾಸದಲ್ಲಿ ಸಾಕಷ್ಟು ಅಂಶಗಳು ಇರುತ್ತವೆ. ಅದರ ಬಗ್ಗೆ ನೂರಕ್ಕೆ ನೂರರಷ್ಟು ಯಾರಿಗೂ ಗೊತ್ತಿರುವುದಿಲ್ಲ. ಅದರಲ್ಲಿ ಸುಳ್ಳು ಇರುತ್ತೆ. ಸತ್ಯಾನೂ ಇರುತ್ತೆ. ಹೀಗಾಗಿ ಇಂಥಾ ನಿರ್ಧಾರಗಳನ್ನ ಮಾಡುವಾಗ ಎಲ್ಲರೊಂದಿಗೆ ಚರ್ಚೆ ನಡೆಸಬೇಕು. ಏಕಾಏಕಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಅಂತಾ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!