ಹಿಂದೂ ದೇವರುಗಳು ಬಿಜೆಪಿ ಹಿಡಿತದಲ್ಲಿಲ್ಲ: ಸಂಸದೆ ಮೊಹಿತ್ರಾ

253

ಪ್ರಜಾಸ್ತ್ರ ಸುದ್ದಿ

ಕೊಲ್ಕತ್ತಾ: ಕಾಳೆ ಮಾತೆ ವಿಚಾರಕ್ಕೆ ಸಂಬಂಧಿಸಿದಂತೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ನೀಡಿರುವ ಹೇಳಿಕೆ ವಿರುದ್ಧ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಬಂಗಾಳಿ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿರುವ ಮೊಯಿತ್ರಾ, ಬಂಗಾಳದ ಜನರಿಗೆ ಕಾಳಿ ಮಾತೆ ಆರಾಧನೆ ಬಗ್ಗೆ ಹೇಳಿ ಕೊಡುವ ಅಗತ್ಯವಿಲ್ಲ. ಹಿಂದು ದೇವರುಗಳು ಬಿಜೆಪಿ ಹಿಡಿತದಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಭಾರತದ ಬೇರೆ ಬೇರೆ ಭಾಗಗಳಲ್ಲಿ ವಿಭಿನ್ನ ಆಚರಣೆಗಳಿವೆ. ಉತ್ತರ ಭಾರತದಲ್ಲಿ ಪೂಜಿಸುವ ವಿಧಾನಗಳ ಆಧಾರದ ಮೇಲೆ ಬಿಜೆಪಿ ತನ್ನ ಅಭಿಪ್ರಾಯ ಹೇರಲು ಸಾಧ್ಯವಿಲ್ಲ. ಭಗವಾನ್ ರಾಮ ಹಾಗೂ ಹನುಮಾನ ಬಿಜೆಪಿ ಸೇರಿದವರಲ್ಲ. ಬಿಜೆಪಿ ಏನು ಹಿಂದು ಧರ್ಮದ ಗುತ್ತಿಗೆ ತೆಗೆದುಕೊಂಡಿದಿಯಾ ಎಂದು ವಾಗ್ದಾಳಿ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!