ಪುರಿ ಜಗನ್ನಾಥ ರಥಯಾತ್ರೆ: ಇಂದು ಅರ್ಜಿ ವಿಚಾರಣೆ

299

ಒಡಿಶಾ: ವಿಶ್ವಪ್ರಸಿದ್ಧ ಪುರಿ ಜಗನ್ನಾಥ ರಥೋತ್ಸವಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಕರೋನಾದಿಂದಾಗಿ ಈ ವರ್ಷ ರಥಯಾತ್ರೆ ರದ್ದು ಮಾಡುವಂತೆ ನೀಡಿರುವ ತೀರ್ಪನ್ನ ಹಿಂದಕ್ಕೆ ಪಡೆಯುವಂತೆ ಕೋರಿ ಸಲ್ಲಿರುವ ಅರ್ಜಿಯ ವಿಚಾರಣೆ ನಡೆಯಲಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್.ರವೀಂದ್ರಮೂರ್ತಿ ನೇತೃತ್ವದ ಏಕಸದಸ್ಯಪೀಠ ಅರ್ಜಿಯ ವಿಚಾರಣೆ ನಡೆಸಲಿದೆ. ಅದು ವಿಡಿಯೋ ಕಾನ್ಫ್ ರೆನ್ಸ್ ಮೂಲಕ ಬೆಳಗ್ಗೆ 11 ಗಂಟೆಗೆ ವಿಚಾರಣೆ ನಡೆಯಲಿದೆ. ಮಹಾಮಾರಿ ಕರೋನಾ ಸೋಂಕು ಹರಡುವ ಭೀತಿಯಿಂದ, ಲಕ್ಷಾಂತರ ಜನ ಸೇರುವ ಪುರಿ ಜಗನ್ನಾಥ ರಥೋತ್ಸವಕ್ಕೆ ಮುಖ್ಯನ್ಯಾಯಮೂರ್ತಿ ಬೊಬ್ಡೆ ನೇತೃತ್ವದ ಮೂವರು ನ್ಯಾಯಾಧೀಶರ ಪೀಠ ಈ ವರ್ಷ ರಥಯಾತ್ರೆಯನ್ನ ರದ್ದುಗೊಳಿಸಿ ತೀರ್ಪು ನೀಡಿದ್ರು.




Leave a Reply

Your email address will not be published. Required fields are marked *

error: Content is protected !!