ಖುಷಿಯ ಸಂಗತಿ: ರಾಜ್ಯದಲ್ಲಿ ಇಳಿಕೆ ಕಾಣ್ತಿರುವ ಕೋವಿಡ್ ಪ್ರಕರಣ

249

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದ ಜನತೆಗೆ ಇದು ನಿಜಕ್ಕೂ ಖುಷಿಯ ಸಂಗತಿಯಾಗಿದೆ. ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಇಳಿಮುಖವಾಗ್ತಿದೆ. ಸೋಮವಾರ 8244 ಜನರಲ್ಲಿ ಸೋಂಕು ಪತ್ತೆಯಾದ್ರೆ, ಇಂದು 7576 ಜನರಲ್ಲಿ ಸೋಂಕು ದೃಢಪಟ್ಟಿದೆ. ಕಳೆದ ಶುಕ್ರವಾರ, ಶನಿವಾರ, ಭಾನುವಾರ 9 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು.

ಇಂದಿನ ಪ್ರಕರಣದೊಂದಿಗೆ 4,75,265 ಜನರಲ್ಲಿ ಕೋವಿಡ್ 19 ದೃಢಪಟ್ಟಿದೆ. ಇಂದು 7,406 ಜನರು ಡಿಸ್ಚಾರ್ಜ್ ಆಗಿದ್ದು 3,69,229 ಜನರು ಇದುವರೆಗೂ ಗುಣಮುಖರಾಗಿದ್ದಾರೆ. ಇನ್ನು 97 ಜನರು ಸಾವನ್ನಪ್ಪಿದ್ದು 7,481ಕ್ಕೆ ಮೃತರ ಸಂಖ್ಯೆ ಏರಿಕೆಯಾಗಿದೆ. 794 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾವಾರು ಸೋಂಕಿತ ವಿವರ ಇಲ್ಲಿದೆ ನೋಡಿ..




Leave a Reply

Your email address will not be published. Required fields are marked *

error: Content is protected !!