ಪ್ರಜಾಸ್ತ್ರ ಸುದ್ದಿ
ನವದೆಹಲಿ: ಇಂದು ಸಂಜೆ 6 ಗಂಟೆಗೆ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗ್ತಿದ್ದು, ಹೊಸದಾಗಿ 43 ಜನರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡ್ತಿದ್ದಾರೆ ಎಂದು ಹೇಳಲಾಗ್ತಿದೆ. ಮಳೆಗಾಲದ ಅಧಿವೇಶನಕ್ಕೂ ಮೊದ್ಲು ಸಂಪುಟ ವಿಸ್ತರಣೆಯಾಗ್ತಿದ್ದು, ಇದರಲ್ಲಿ ಕರ್ನಾಟಕದ ಮೂವರಿಗೆ ಸಚಿವ ಸ್ಥಾನ ಸಿಗಲಿದೆಯಂತೆ.
14 ಜನರು 50 ವರ್ಷಕ್ಕಿಂತ ಕಡಿಮೆ ಇದ್ದಾರಂತೆ. 5 ಜನ ಮಹಿಳೆಯರು, 13 ಜನ ವಕೀಲರು, 6 ಜನ ವೈದ್ಯರು, 5 ಜನ ಎಂಜನಿಯರ್ಸ್, 7 ಜನ ನಾಗರೀಕ ಸೇವೆಯಲ್ಲಿದ್ದವರು ಕ್ಯಾಬಿನೆಟ್ ಸಚಿವ ಭಾಗ್ಯ ಪಡೆಯಲಿದ್ದಾರೆ.
ಇನ್ನು ಜಾತಿವಾರು ನೋಡಿದ್ರೆ ಇದರಲ್ಲಿ 23 ಒಬಿಸಿ, 8 ಎಸ್ಟಿ, 12 ಎಸ್ಸಿ ವರ್ಗಕ್ಕೆ ಸೇರಿದವರು ಇದ್ದಾರಂತೆ. ಇದರಲ್ಲಿಯೇ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸಹ ಇರುವುದಾಗಿ ಹೇಳಲಾಗ್ತಿದೆ.